ಶಿಕ್ಷಕರ ಶಿಕ್ಷಣ ವಿಭಾಗ

ಶಿಕ್ಷಕರ ಶಿಕ್ಷಣ ವಿಭಾಗ


ಪ್ರಾಥಮಿಕ ವಿಭಾಗ

ಶಾಖೆಯ ಹೆಸರು: ಎಸ್.ಎಸ್.ಕೆ ಪ್ರಾಥಮಿಕ ವಿಭಾಗ (ಸಮಗ್ರ ಶಿಕ್ಷಣ ಕರ್ನಾಟಕ)

ಪೀಠಿಕೆ : ಈ ವಿಭಾಗವು 1 ರಿಂದ 8 ನೇ ತರಗತಿಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾನಿರತ ತರಬೇತಿಯನ್ನು ನೀಡುತ್ತದೆ.

ಧ್ಯೇಯೋದ್ದೇಶಗಳು :

  • ಶಿಕ್ಷಕರ ವೃತ್ತಿಪರ ಬೆಳವಣಿಗೆಯನ್ನು ವೃದ್ದಿಸುತ್ತದೆ.
  • ಶಿಕ್ಷಕರನ್ನು ಪ್ರತಿಫಲಿತ ಅಭ್ಯಸಿಗರನ್ನಾಗಿ ಮಾಡಲು ಸಹಾಯ ಮಾಡುವುದು.
  • ಶಿಕ್ಷಕರಿಗೆ ಸ್ವಯಂ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವಕಾಶವನ್ನು ಒದಗಿಸುವುದು,
  • ಪ್ರತಿ ಮಗುವಿನ ಅನನ್ಯತೆ ಮತ್ತು ಸಾಮರ್ಥ್ಯವನ್ನು ಪರಿಗಣಿಸಿ ಕಲಿಕೆಯನ್ನು ಸುಗಮಗೊಳಿಸುವಂತೆ ಶಿಕ್ಷಕರನ್ನು ಸಿದ್ಧಪಡಿಸುವುದು.

ಶಾಖೆಯ ಪ್ರಮುಖ ಚಟುವಟಿಕೆಗಳು : ರಾಜ್ಯದ ಎಲ್ಲಾ ಡಯಟ್ಗಳು ಮತ್ತು ಸಿ.ಟಿ.ಇ ಗಳ ಮುಖಾಂತರ ಪಿ.ಎ.ಬಿ ಹಾಗೂ ಎನ್.ಸಿ.ಇ.ಆರ್.ಟಿಯಿಂದ ಅನುಮೋದಿತವಾದ ತರಬೇತಿಗಳನ್ನು ಅವರ ಮಾರ್ಗದರ್ಶನದಂತೆಯೇ ಭೌತಿಕ ಹಾಗೂ ಆರ್ಥಿಕ ಗುರಿಯನ್ನು ನಿಗದಿಪಡಿಸಿಕೊಂಡು ಅದರನ್ವಯ ಶೈಕ್ಷಣಿಕ ಸಾಲಿನಲ್ಲಿ ತರಬೇತಿಗಳನ್ನು ನೀಡಲಾಗುತ್ತಿದೆ.

ಶಾಖೆಯ ಪ್ರಮುಖ ಚಟುವಟಿಕೆಗಳಿಗೆ ಸಂಬಂದಿಸಿದ ಕಾರ್ಯಕ್ರಮಗಳು :

  1. ಪಿ.ಎ.ಬಿ ಹಾಗೂ ಎನ್.ಸಿ.ಇ.ಆರ್.ಟಿ ಅನುಮೋದಿತ ತರಬೇತಿಗಳು
  2. ಎನ್.ಇ.ಪಿ ೨೦೨೦ ಆಧಾರಿತ ಗುರುಚೇತನ ಶಿಕ್ಷಕರ ವೃತ್ತಿಪರ ತರಬೇತಿ
  3. ನಿಷ್ಠಾ ೧.೦ ಹಾಗೂ ೩.೦ ಶಿಕ್ಷಕರ ತರಬೇತಿಗಳು

ಶಾಖೆಯ ಪ್ರಮುಖ ಕಾರ್ಯಕ್ರಮಗಳು-ಪ್ರಗತಿ : ಶಿಕ್ಷಕರ ಸೇವಾ ನಿರತ ತರಬೇತಿಗಳನ್ನು ದೀಕ್ಷಾ ಪೋರ್ಟಲ್ನಲ್ಲಿ ಆನ್ಲೈನ್ ಹಾಗೂ ಮುಖಾಮುಖಿಯಾಗಿ ನೀಡಲಾಗುತ್ತಿದೆ. ತರಬೇತಿಗಳು ಅನುಷ್ಠಾನದ ಹಂತದಲ್ಲಿರುತ್ತದೆ.

ಶಾಖೆಯಿಂದ ನಿರ್ವಹಿಸಲಾಗುತ್ತಿರುವ ತರಬೇತಿಗಳ ವಿವರ :

ನಿಷ್ಠಾ-1.0 ನಿಷ್ಠಾ-2.0 ಮತ್ತು ನಿಷ್ಠಾ-3.0 ಕಾರ್ಯಕ್ರಮವು ರಾಷ್ಟ್ತೀಯ ಉಪಕ್ರಮವಾಗಿದ್ದು, ಸಮಗ್ರ ಶಿಕ್ಷಕರ ತರಬೇತಿಯ ಮೂಲಕ ಶಾಲಾಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಮತ್ತು ಶಿಕ್ಷಕರ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶವನ್ನು ಹೊಂದಿದೆ. ಇವು ಮೆಗಾಟ್ರೈನಿಂಗ್ ಪ್ರೋಗ್ರಾಂಗಳಾಗಿದ್ದು, ಸ್ವ-ವೇಗದ ಕಲಿಕೆಗೆ ಅವಕಾಶವಿರುವ, ರಾಷ್ಟ್ರಾದ್ಯಂತ ಏಕರೂಪವಾಗಿ ಅನುಷ್ಠಾನವಾಗುತ್ತಿರುವ, ವೈವಿಧ್ಯಮಯ ಕೋರ್ಸ್ಗಳಿಂದ ಕೂಡಿದ ಡಿಜಿಟಲ್ ಪ್ರಮಾಣ ಪತ್ರ ದೊರೆಯುವ ಅತಿ ದೊಡ್ಡ ತರಬೇತಿಯಾಗಿದೆ.

ರಾಷ್ಟ್ರಹಂತದಲ್ಲಿ ಮಾನ್ಯ ಗೌರವಾನ್ವಿತ ಕೇಂದ್ರಶಿಕ್ಷಣಮಂತ್ರಿಗಳು, ಭಾರತ ಸರ್ಕಾರ ಇವರು ದಿನಾಂಕ 06-10-2020 ರಂದು ನಿಷ್ಠಾ ಆನ್ಲೈನ್ ಮಾಡ್ಯೂಲ್ಗಳನ್ನು ಲೋಕಾರ್ಪಣೆ ಮಾಡಿರುತ್ತಾರೆ. 05-07-2021 ರಂದು ಅರ್ಥಗ್ರಹಿಕೆ ಮತ್ತು ಪ್ರಾವೀಣ್ಯತೆಯೊಂದಿಗೆ ಓದುವಲ್ಲಿ ಪ್ರಾವೀಣ್ಯತೆಗಾಗಿ ರಾಷ್ಟಿಯ ಉಪಕ್ರಮ "ನಿಪುಣ್ ಭಾರತ್ ಮಿಷನ್" ಅನ್ನು ಪ್ರಾರಂಭಿಸಿದ್ದಾರೆ. ಇದು ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಸಾಮರ್ಥ್ಯದ ಸಾರ್ವತ್ರಿಕ ಸ್ವಾಧೀನವನ್ನು ಖಚಿತಪಡಿಸಿಕೊಳ್ಳುವ ವಾತವರಣವನ್ನು ರಚಿಸುವುದರೊಂದಿಗೆ, ಪ್ರತಿ ಮಗುವು 2026-27ರ ವೇಳೆಗೆ 3ನೇ ತರಗತಿಯ ಅಂತ್ಯದೊಳಗೆ ಓದುವ, ಬರವಣಿಗೆ ಮತ್ತು ಸಂಖ್ಯಾಶಾಸ್ತ್ರದಲ್ಲಿ ಅಪೇಕ್ಷಿತ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಎನ್.ಸಿ.ಇ.ಆರ್.ಟಿ ನೇತೃತ್ವದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಸರ್ಕಾರಿ ಮತ್ತು ಅನುದಾನಿತ, ಖಾಸಗಿ, ಅನುದಾನರಹಿತ ಶಾಲಾ ಶಿಕ್ಷಕರಿಗೆ ದೀಕ್ಷಾ ಪೋರ್ಟ್ಲ್ನಲ್ಲಿ ನಿಷ್ಠಾ-3.0 ಹಾಗೂ ನಿಷ್ಠಾ-2.0 ತರಬೇತಿಯನ್ನು ಆಯೋಜಿಸಲಾಗಿದೆ.

ನಿಷ್ಠಾ 1.0 ತರಬೇತಿ 2020-2021 ಎಸ್.ಎಸ್.ಎ 2020-21 ಸಾಲಿಗಾಗಿ ಪಿ.ಎ.ಬಿ ಯಿಂದ ಅನುಮೋದನೆಯಾಗಿರುವಂತೆ 1,52,773 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಿಷ್ಠಾ ತರಬೇತಿಯನ್ನು ಆನ್ಲೈನ್ನಲ್ಲಿ ನೀಡಲಾಗುತ್ತಿದ್ದೂ ಒಟ್ಟು 1,52,773 ಶಿಕ್ಷಕರುಗಳಿಗೆ ನವೆಂಬರ್ನಿಂದ ಆನ್ಲೈನ್ ತರಬೇತಿಯನ್ನು ಪ್ರಾರಂಭಿಸಲಾಗಿದ್ದು, ಮಾರ್ಚ್ 3 3ನೇ ವಾರದಲ್ಲಿ ಒಟ್ಟು18 ಮಾಡ್ಯೂಲ್ಗಳನ್ನು ಎಲ್ಲಾ ಶಿಕ್ಷಕರು ಪರಿಚಯಿಸಿಕೊಂಡಿರುತ್ತಾರೆ.

ನಿಷ್ಠಾ-3.0 (FLN) 2021-2022 ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆನ್ಲೈನ್ ದೀಕ್ಷಾ ಪೊರ್ಟಲ್ನಲ್ಲಿ ನೀಡಲಾಗುತ್ತಿರುವ ಈ ತರಬೇತಿಗಳಲ್ಲಿ ಎನ್.ಇ.ಪಿ-2020ರ ಆಶಯಗಳನ್ನು ಒಳಗೊಂಡಿದ್ದು ರಾಜ್ಯಾದ್ಯಾಂತ ಶಿಕ್ಷಕರು ತರಬೇತಿಯನ್ನು ಪಡೆಯುತ್ತಿದ್ದಾರೆ. ನಿಷ್ಠಾ-3.0 (FLN): ಕಾರ್ಯಕ್ರಮ ಅಕ್ಟೊಬರ್ 01 ರಿಂದ ಪ್ರಾರಂಭಿಸಲಾಗಿದ್ದೂ ದಿನಾಂಕ: 10:06:2022 ರ ಅಂತ್ಯಕ್ಕೆ ಕೋರ್ಸ್ ತರಬೇತಿ ಹೊಂದಿ ಪ್ರಮಾಣ ಪತ್ರವನ್ನು ಪಡೆದವರ ಸಂಖ್ಯೆ ಕೆಳಗಿನಂತಿವೆ. ಒಟ್ಟಾರೆಯಾಗಿ ನಿಷ್ಠಾ 3.0 ತರಬೇತಿಯಡಿಯಲ್ಲಿ 2021-22 ಸಾಲಿಗೆ ಪಿ.ಎ.ಬಿ ಗುರಿ 51056 ಇದ್ದು 94,401 ಪ್ರಗತಿಯನ್ನು ಸಾಧಿಸಲಾಗಿದೆ.

ನಿಷ್ಠಾ ತರಬೇತಿಗಳು 2022-2023

1) ನಿಷ್ಠಾ (NISHTHA)- (National Initiative for School Heads' and Teachers' Holistic Advancement) ಆನ್ಲೈನ್ ತರಬೇತಿಯು ಅತ್ಯಂತ ಮಹತ್ವವಾದ ತರಬೇತಿ ಕಾರ್ಯಕ್ರಮವಾಗಿದ್ದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ರಾಷ್ಟ್ರಾದ್ಯಾಂತ ಏಕಸ್ವರೂಪದಲ್ಲಿ ಎಲ್ಲಾ ಶಿಕ್ಷಕರನ್ನು ತಲುಪಿದೆ. ಈ ಕಾರ್ಯಕ್ರಮವು ತನ್ನ ಸ್ವರೂಪಕ್ಕೆ ಅನುಗುಣವಾಗಿ ಅನುಷ್ಠಾನವಾಗಲು ಎಲ್ಲಾ ಹಂತದ ಖಾಸಗಿ, ಅನುದಾನರಹಿತ ಶಿಕ್ಷಕರ ವರ್ಗವು ಕೈಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ಅಧಿಕಾರಿಗಳಿಗೆ ವಿವಿಧ ಪಾತ್ರ ಮತ್ತು ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ. ರಾಜ್ಯದ ಎಲ್ಲಾ ಡಯಟ್ಗಳು ಅಗತ್ಯ ಪೂರ್ವಸಿದ್ಧತೆಯೊಂದಿಗೆ ಯೋಜಿಸಿ ಸದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು. ರಾಜ್ಯದ ಎಲ್ಲಾ ಖಾಸಗಿ ಮತ್ತು ಅನುದಾನರಹಿತ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರಿಗೆ ಈ ತರಬೇತಿಯನ್ನು ಆನ್ಲೈನ್ನಲ್ಲಿ ನೀಡಲಾಗುವುದು.

2022-23ನೇ ಸಾಲಿನಲ್ಲಿ ಖಾಸಗಿ, ಅನುದಾನರಹಿತ ಶಾಲಾ ಶಿಕ್ಷಕರಿಗೆ ನಿಷ್ಠಾ ಆನ್ಲೈನ್ ತರಬೇತಿ ಕೋರ್ಸ್ಗಳನ್ನು ನಿಗದಿಪಡಿಸಲಾಗಿದ್ದು, ಈ ತರಬೇತಿಯನ್ನು ಎಲ್ಲಾ ಶಿಕ್ಷಕರು ಪಡೆದುಕೊಳ್ಳಲು ತಿಳಿಸಿದೆ. ಕೋರ್ಸ್ಗಳ ವಿವರ ಈ ಕೆಳಕಂಡಂತಿದೆ.

ಕ್ರ ಸಂ.ಕೋರ್ಸ್ಗಳ ವಿವರಮಾಡ್ಯೂಲ್ಗಳ ವಿವರ
1ನಿಷ್ಠಾ-1.0 ಪ್ರಾಥಮಿಕ ಶಾಲಾ ಶಿಕ್ಷಕರಿಗೆ (1 ರಿಂದ 8ನೇ ತರಗತಿ ಶಿಕ್ಷಕರಿಗೆ)18
2ನಿಷ್ಠಾ-2.0 ಪ್ರೌಢಶಾಲಾ ಶಿಕ್ಷಕರಿಗೆ (9 ರಿಂದ 10ನೇ ತರಗತಿ ಶಿಕ್ಷಕರಿಗೆ)12
3ನಿಷ್ಠಾ-3.0 ಪ್ರಾಥಮಿಕ ಶಾಲಾ ಶಿಕ್ಷಕರಿಗೆ (1 ರಿಂದ 5ನೇ ತರಗತಿ ಶಿಕ್ಷಕರಿಗೆ)12

ಈ ತರಬೇತಿಯು 01.07.2022 ರಿಂದ 30.04.2023 ರವರೆಗೆ ಆನ್ಲೈನ್ (DIKSHA app) ನಲ್ಲಿ ಲಭ್ಯವಾಗಲಿದೆ. ಎಲ್ಲಾ ಕೋರ್ಸ್ಗಳನ್ನು ತಮ್ಮ ವ್ಯಾಪ್ತಿಯ ಖಾಸಗಿ, ಅನುದಾನರಹಿತ ಶಾಲೆಯ ಶಿಕ್ಷಕರು ತರಬೇತಿ ಪಡೆಯಲು ಅಗತ್ಯ ಬೆಂಬಲ ಮತ್ತು ಮಾರ್ಗದರ್ಶನ ನೀಡಿ ಕ್ರಮವಹಿಸಲು ಹಾಗೂ ನಿಷ್ಠಾ ತರಬೇತಿಯ ಪೂರ್ವಸಿದ್ಧತೆಗೆ ಟೆಲಿಗ್ರಾಮ್ ಗ್ರೂಪ್ನ್ನು ರಚಿಸಲು ಮಾಡಿಕೊಳ್ಳಬೇಕಾದ ವಿವರಗಳನ್ನು, ಬ್ಲಾಕ್ ಮತ್ತು ಜಿಲ್ಲಾ ಹಂತದ ತಾಂತ್ರಿಕ ಮತ್ತು ಅನುಷ್ಠಾನ ಸಮಿತಿಯ ಪಾತ್ರ ಮತ್ತು ಜವಾಬ್ದಾರಿಗಳನ್ನು ಸೂಚಿಸಲಾಗಿದೆ.

ವಿಶೇಷ ಸೂಚನೆ :ನಿಷ್ಠಾ ಕೋರ್ಸ್ಗಳ ತರಬೇತಿಯನ್ನು ಇದುವರೆಗು ಪೂರ್ಣಗೊಳಿಸಿದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ ಅಧಿಕಾರಿಗಳು ಈ ಲಿಂಕ್ಗಳನ್ನು ಬಳಸಿ ಕೋರ್ಸ್ಗಳನ್ನು ಪೂರ್ಣಗೊಳಿಸುವುದು. CLick here

2022-23 ನೇ ಸಾಲಿನ ಎಸ್.ಎಸ್.ಕೆ ಪ್ರಾಥಮಿಕ ವಿಭಾಗದ ಗುರುಚೇತನ ಕಾರ್ಯಕ್ರಮಕಾರ್ಯಕ್ರಮದಡಿ 1 ರಿಂದ 8ನೇ ತರಗತಿ ಬೋಧಿಸುತ್ತಿರುವ ಶಿಕ್ಷಕರಿಗಾಗಿ ಎನ್.ಇ.ಪಿ-2020 ರ ಆಶಯದಂತೆ 34 ಮಾಡ್ಯೂಲ್ಗಳ ಕಪ್ಲೆಟ್ ಮತ್ತು ವೀಡಿಯೋಗಳನ್ನು ಸೃಜಿಸಿ ದೀಕ್ಷಾ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಜೂನ್-2022 ರ ಮಾಹೆಯಿಂದ ಶಿಕ್ಷಕರ ತರಬೇತಿಯು ಆಯೋಜನೆಗೊಳ್ಳಲಿದ್ದು ದೀಕ್ಷಾ ಪೋರ್ಟಲ್ನಲ್ಲಿ ಮಾಡ್ಯೂಲ್ ಕೋರ್ಸ್ಗಳು ಲಭ್ಯವಿದೆ.ಪ್ರತಿ ಡಯಟ್ನಲ್ಲಿ ಯಾವುದಾದರೂ ಒಂದು ಮಾಡ್ಯೂಲ್ನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡು ಭೌತಿಕವಾಗಿ ಮುಖಾಮುಖಿ ತರಬೇತಿಯನ್ನು ಆಯೋಜಿಸಿರುತ್ತಾರೆ.

ತರಬೇತಿ ವಿಧ ತರಬೇತಿಯ ಹೆಸರು ಒಟ್ಟು ಕೋರ್ಸ್‌ಗಳು ಒಟ್ಟು ನೊಂದಣಿ ಮಾಡಿದವರು/ ಗುರಿ ಪೂರ್ಣಗೊಳಿಸಿದವರ ಸಂಖ್ಯೆ/ ಸಾಧನೆ ಪ್ರಮಾಣ ಪತ್ರ ಪಡೆದವರ ಸಂಖ್ಯೆ
01 ಮುಖಾಮುಖಿ ತರಬೇತಿ ಎನ್.ಇ.ಪಿ-2020ರ ಕಾರ್ಯಕ್ರಮದಡಿ ಗುರುಚೇತನ ಆಧಾರಿತ ಶಿಕ್ಷಕರ ಮುಖಾಮುಖಿ ತರಬೇತಿ


131 ರಿಂದ 164
1700 1684 -
ಬ್ಯಾಚ್ -01 ಆನ್‌ಲೈನ್) ಎನ್.ಇ.ಪಿ-2020ರ ಕಾರ್ಯಕ್ರಮದಡಿ ಗುರುಚೇತನ ಆಧಾರಿತ ಶಿಕ್ಷಕರ ಮುಖಾಮುಖಿ ತರಬೇತಿ 20,94,362 18,21,359 16,92,392
ಬ್ಯಾಚ್ -02 ಆನ್‌ಲೈನ್) ಎನ್.ಇ.ಪಿ--2020ರ ಕಾರ್ಯಕ್ರಮದಡಿ ಗುರುಚೇತನ ಆಧಾರಿತ ಶಿಕ್ಷಕರ ಮುಖಾಮುಖಿ ತರಬೇತಿ 2,39,214 1,60,258 1,42,662

ಉದಾಹರಣೆ

“ವಿಶೇಷ ಸನ್ನಿವೇಶದ ಶಾಲೆಗಳಲ್ಲಿ ತರಗತಿ ಪ್ರಕ್ರಿಯೆ-ಸವಾಲುಗಳು ಮತ್ತು ಸಾಧ್ಯತೆಗಳು”-148 ಈ ಮಾಡ್ಯೂಲ್ ನ ತರಬೇತಿಯನ್ನು ಡಯಟ್,ಕೊಡಗಿನಲ್ಲಿ ದಿನಾಂಕ 13-06-2022 ರಿಂದ 17-06-2022 ರ ವರೆಗೆ ಹಮ್ಮಿಕೊಳ್ಳಲಾಗಿತ್ತು.

ಡಯಟ್,ಕೊಡಗಿನಲ್ಲಿ ಸ್ಥಾಪಿಸಲಾಗಿರುವ ಸ್ಥಳೀಯ ಸಾಂಸ್ಕೃತಿಕ ಘಟಕಕ್ಕೆ ಭೇಟಿ ನೀಡಲಾಯಿತು. ಹಳೆಯ ಕಾಲದ ಕೃಷಿ, ಆಹಾರ ತಯಾರಿ, ಸಾಂಸ್ಕೃತಿಕ ಆಚರಣೆಗಳು, ಅಳತೆಮಾನಗಳು, ದಿನಬಳಕೆಯ ಪರಿಕರಗಳು, ಗುಡಿಕೈಗಾರಿಕೆಯಲ್ಲಿ ತಯಾರಾದ ಪರಿಸರ ಸ್ನೇಹಿ ವಸ್ತುಗಳು ಮತ್ತು ಜಿಲ್ಲೆಯ ಚಿತ್ರಕಲಾ ಶಿಕ್ಷಕರು ಚಿತ್ರಿಸಿರುವ ಕೊಡಗಿನ ಸಂಸ್ಕೃತಿಗೆ ಸಂಬಂಧಪಟ್ಟ ಕಲಾಕೃತಿಗಳ ಸಂಗ್ರಹವನ್ನು ವೀಕ್ಷಿಸಲಾಯಿತು.

ಈ ಭೇಟಿಯ ಮೂಲಕ ಸಾಮಾಜಿಕ ಬದಲಾವಣೆ, ಸಾಂಪ್ರದಾಯಿಕ ಕೃಷಿ ಪದ್ಧತಿ, ಆಹಾರ ತಯಾರಿಸಲು ಬಳಸುತ್ತಿದ್ದ ಪರಿಕರಗಳನ್ನು ಸ್ಪರ್ಶಿಸಲು ಅವುಗಳ ಗುಣಲಕ್ಷಣಗಳನ್ನು ತಿಳಿಯಲು ಒಟ್ಟಾರೆಯಾಗಿ ಮಾನವನ ಸರಳ ಜೀವನ ಪದ್ಧತಿಯನ್ನು ತಿಳಿಯಲು ಸಹಾಯಕವಾಯಿತು. ಶಿಕ್ಷಕರು ತಮ್ಮ ಶಾಲೆಗಳಲ್ಲಿ ಸ್ಥಳೀಯವಾಗಿ ಸಿಗುವ ಇಂತಹ ಪರಿಕರಗಳನ್ನು ಸಂಗ್ರಹಿಸಿ ಮಕ್ಕಳಿಗೆ ಪರಿಚಯ ಮಾಡಿಕೊಡುವ ಮಾರ್ಗಗಳನ್ನು ಕಂಡುಕೊಂಡರು.

   

ಎನ್.ಇ.ಪಿ-2020 ರ ಆಶಯದಂತೆ 34 ಮಾಡ್ಯೂಲ್ಗಳ ಪಟ್ಟಿಯನ್ನುಈ ಕೆಳಗೆ ನೀಡಿರುವ ವೆಬ್ಲಿಂಕ್ ಹಾಗೂ Q.R ಕೋಡ್ನಿಂದ ಪಡೆಯಬಹುದು. Click here

ತರಬೇತಿಗಳ 3ವರ್ಷಗಳ ಅಂಕಿ-ಅಂಶಗಳು :

Slno ತರಬೇತಿ-ಪ್ರಾಥಮಿಕ ವಿಭಾಗ ವಾರ್ಷಿಕಗುರಿ ಸಾಧನೆ ಭೌತಿಕ ಗುರಿ ಸಾಧನೆ ಭೌತಿಕ ಗುರಿ ಸಾಧನೆ ಭೌತಿಕ ಗುರಿ ಸಾಧನೆ ಶೇಕಡಾ
2019-20 2020-21 2021-22
1 ಗುರುಚೇತನ 60541 57425 0 0 0 0 60541 57425 98.85
2 ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ 166135 159646 152733 146487 0 0 318868 306133 96
ನಿಷ್ಠಾ-1.0
3 ನಿಷ್ಠಾ-3.0 0 0 0 0 51056 66707 51056 66707 130.65
4 ಇಂಗ್ಲೀಷ್‌ ನಲಿ-ಕಲಿ ಲೆವೆಲ್-‌1 0 0 59484 38466 0 0 59484 38466 64.66
5 ಇಂಗ್ಲೀಷ್‌ ನಲಿ-ಕಲಿ ಲೆವೆಲ್-‌2 0 0 0 0 2732 2545 2732 2545 93.15
6 ಹೋಬಳಿ ಶೇರಿಂಗ್‌ ಮೀಟಿಂಗ್ 166135 142169 0 0 152733 132110 318868 274279 86.01

3) ಇಂಗ್ಲಿಷ್ ನಲಿ-ಕಲಿ ತರಬೇತಿ

ಇಂಗ್ಲಿಷ್ ನಲಿ-ಕಲಿ ಲೆವೆಲ್-01 2020-21

ಪ್ರಸ್ತುತ ನಲಿ-ಕಲಿ ಬೋಧನಾ ವಿಧಾನಗಳಲ್ಲಿ ಇಂಗ್ಲೀಷ್ನ್ನು ಕಲಿಸಲಾಗುತ್ತಿದೆ. ಮಾತೃಭಾಷೆಯ ಮೂಲ ಪರಿಸರದ ಜೊತೆಯಲ್ಲಿಯೇ ಇಂಗ್ಲಿಷ್ ಭಾಷೆಯನ್ನು ಕಲಿಸುವುದು ಇದರ ಉದ್ದೇಶವಾಗಿದೆ.

ಶಿಕ್ಷಕರಲ್ಲಿ ಮತ್ತು ವಿಧ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು ಮತ್ತು ಬೋಧನಾ ಕೌಶಲ್ಯವನ್ನು ತಳಹಂತ/ಮೂಲಹAತದಲ್ಲಿಯೇ ಭದ್ರಪಡಿಸುವುದು ಈ ತರಬೇತಿಯ ಉದ್ದೇಶವಾಗಿದೆ. ಇಂಗ್ಲೀಷ್ ನಲಿ-ಕಲಿ ತರಬೇತಿಯಲ್ಲಿ 1,068 ಜನರಿಗೆ ಎಂ.ಆರ್.ಪಿ. ತರಬೇತಿಯನ್ನು ಹಾಗೂ ಇದುವರೆಗೆ ಬ್ಲಾಕ್ವಾರು 37,398 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

ಇಂಗ್ಲಿಷ್ ನಲಿ-ಕಲಿ ಲೆವೆಲ್-02

ರ ತರಬೇತಿ 2021-22 ನೇ ಸಾಲಿನ ಎಸ್.ಆರ್.ಪಿ, ಎಂ.ಆರ್.ಪಿ ಹಾಗೂ ಶಿಕ್ಷಕರ ತರಬೇತಿಯು ಒಟ್ಟು ಭೌತಿಕ ಗುರಿಯು 2732 ಇದ್ದು 2545 ಗುರಿ ಸಾಧಿಸಿದ್ದು, 93% ಪ್ರಗತಿ ಸಾಧಿಸಲಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ವೃತ್ತಿಪರ ಅಭಿವೃದ್ದಿ ತರಬೇತಿ (5 ದಿನಗಳು)

ಮಾನ್ಯ ಆಯುಕ್ತರ ಸಭೆಯಲ್ಲಿ ತಿಳಿಸಿದಂತೆ ಈ ಸಂಬಂಧ ಮಾರ್ಚ್ 31-2021 ರ ಅಂತ್ಯದವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಲಿಕಲಿ ಸಮಗ್ರ, ಜೀವನ ಕೌಶಲ ಸೇರಿದಂತೆ ಶಿಕ್ಷಕರಿಗೆ ಮುಖಾಮುಖಿ ಹಾಗೂ ತಂತ್ರಜ್ಞಾನ ಆಧಾರಿತ ಗೂಗಲ್ ಮೀಟ್/ಮೈಕ್ರೋಸಾಫ್ಟ್/ಜೂಮ್ ಇತ್ಯಾದಿ ಮೀಟಿಂಗ್ ಆಪ್ಗಳನ್ನು ಬಳಸಿ ಕಾರ್ಯಗಾರಗಳನ್ನು ನಡೆಸಲಾಗಿದೆ. ಇಲ್ಲಿಯವರೆಗೆ ಒಟ್ಟು 1,21,933 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

ಕ್ರ.ಸಂತರಬೇತಿ ವಿವರಭೌತಿಕ ಗುರಿಭೌತಿಕ ಸಾಧನೆ
1ಮುಖಾಮುಖಿ ತರಬೇತಿ ಮತ್ತು ಆನ್ಲೈನ್ ತರಬೇತಿ1,52,7331,21,933

ಶಿಕ್ಷಕರ ಸಮಾಲೋಚನಾ ಸಭೆಗಳು

ಡಿ.ಎಸ್.ಇ.ಆರ್.ಟಿ ಹಾಗೂ ಸ್ಟರ್ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ 2021-22 ಸಾಲಿನ ಮೊದಲ ಕ್ಲಸ್ಟರ್ ಶಿಕ್ಷಕರ ಸಮಾಲೊಚನಾ ಸಭೆಯನ್ನು ದಿ: 29-09-2021 ರಂದು ಆನ್ಲೈನ್ ಮೂಲಕ ಆಯೋಜಿಸಿದ್ದೂ ಒಟ್ಟು 1,32,110 ಶಿಕ್ಷಕರು ಹಾಗೂ ಎರಡನೇ ಕ್ಲ.ಶಿ.ಸ. ಸಭೆಯನ್ನು ದಿ: 29-10-2021ರಂದು ಆಯೋಜಿಸಿದ್ದು, CSAS ಮತ್ತ NAS, ಕಲಿಕಾಫಲಗಳು, ಬೋಧನಾ ಕಲಿಕಾ ಪ್ರಕ್ರಿಯೆಗಳ ಆಧಾರದ ಮೇಲೆ ನೀಡಲಾಗಿದ್ದು ಒಟ್ಟು 89,205 ಶಿಕ್ಷಕರು ಭಾಗವಹಿಸಿರುತ್ತಾರೆ. ಮೂರನೇ ಕ್ಲ.ಶಿ.ಸ. ಸಭೆಯನ್ನು ದಿ: 29-11-2021 ರಂದು ಆಯೋಜಿಸಿದ್ದು, ಒಟ್ಟು 1,01,322 ಶಿಕ್ಷಕರು ಭಾಗವಹಿಸಿರುತ್ತಾರೆ. ನಾಲ್ಕನೇ ಕ್ಲ.ಶಿ.ಸ. ಸಭೆಯನ್ನು ದಿ: 29-12-2021 ರಂದು "ಕೌಶಲ ದತ್ತಾಂಶ ವಿಶ್ಲೇಷಣೆ ಮತ್ತು ವ್ಯಾಖ್ಯಾನ (ವಿವರಣೆ) & LIC-2 ರ ವಿಷಯ ವಸ್ತು: ಕಲಿಕಾ ನಷ್ಟವನ್ನು ಪರಿಹರಿಸುವ ಭೋಧನಾ ತಂತ್ರಗಳು" ವಿಷಯದ ಆಧಾರಿತ ಆಯೋಜಿಸಿದ್ದು, ಒಟ್ಟು 99,043 ಶಿಕ್ಷಕರು ಭಾಗವಹಿಸಿರುತ್ತಾರೆ. ಐದನೇ ಕ್ಲ.ಶಿ.ಸ. ಸಭೆಯು ದಿ: 29-01-2022 ರಂದು ನೀಡಲಾಗಿದ್ದು ಒಟ್ಟು 92,131 ಶಿಕ್ಷಕರು ಭಾಗವಹಿಸಿರುತ್ತಾರೆ. ಉರ್ದು ಮಾಧ್ಯಮದಲ್ಲಿ 1,2 ಮತ್ತು 3ನೇ ಸಭೆಯಲ್ಲಿ ಒಟ್ಟು 6144 ಶಿಕ್ಷಕರು ಹಾಗೂ ಮರಾಠಿ ಮಾಧ್ಯಮದಲ್ಲಿ 1,2 ಮತ್ತು 3ನೇ ಸಭೆಯಲ್ಲಿ ಒಟ್ಟು 294 ಶಿಕ್ಷಕರು ಭಾಗವಹಿಸಿರುತ್ತಾರೆ.

ಡಯಟ್ಗಳೊಂದಿಗೆ ನಮ್ಮ ಶಾಖೆಯ ಕಾರ್ಯ ನಿರ್ವಹಣೆಯ ವಿವರ :

ಶಿಕ್ಷಕರ ತರಬೇತಿಯ ಕ್ರಿಯಾಯೋಜನೆ, ತರಬೇತಿಯ ಅನುಷ್ಠಾನ, ಆಯೋಜನೆ, ಪ್ರಗತಿ ಪರಿಶೀಲನೆ, ಇ-ಮೇಲ್ ಗಳನ್ನು ದಿನನಿತ್ಯ ವೀಕ್ಷಿಸಿ ಅದರನ್ವಯ ಕಾರ್ಯನಿರ್ವಹಿಸುವುದು. ಇ -ಮೇಲ್ ಗೆ ಪ್ರತಿಕ್ರಿಯಿಸುವುದು, ಸಾಫ್ಟ್ ಪ್ರತಿಗಳ ದಾಖಲೆಗಳ ನಿರ್ವಹಣೆ, ಮಾಡ್ಯೂಲ್ ಗಳ ತಯಾರಿ, ನಿಷ್ಠ ಮಾಡ್ಯೂಲ್ ಕೋರ್ಸ್ಗಳ ಭಾಷಾಂತರಕ್ಕೆ ಸಂಬAಧಿಸಿದAತೆ ತಪ್ಪುಗಳು ಕಾಗುಣಿತ ದೋಷಗಳು, ಕಂಟೆಂಟ್ ದೋಷಗಳನ್ನು ತಿದ್ದುವ ಕಾರ್ಯವನ್ನು ನಿರ್ವಹಿಸುತ್ತಿರುತ್ತೇನೆ. ಡಯಟ್ ಗಳು ಹಾಗೂ ಸಿ ಟಿ ಇ ಗಳು ನಮ್ಮ ವಿಭಾಗಕೆ ತರಬೇತಿಗೆ ಸಂಬಂಧಪಟ್ಟಂತೆ ಸಲ್ಲಿಸಬೇಕಾದ ಹಾರ್ಡ್ ಪ್ರತಿಗಳು ಸಾಫ್ಟ್ ಪ್ರತಿಗಳ ದಾಖಲೆಗಳನ್ನು ನಿರ್ವಹಿಸಲಾಗುತ್ತಿದೆ.

ಡಯಟ್ಗಳ ಪ್ರಾಂಶುಪಾಲರು ಹಾಗೂ ಎಸ್.ಎಸ್.ಕೆ- ಪ್ರಾಥಮಿಕ ವಿಭಾಗದ ನೋಡಲ್ ಅಧಿಕಾರಿಗಳ ಸಂಪರ್ಕ ಪಡೆದು, ಡಿ.ಎಸ್.ಇ.ಆರ್.ಟಿ ವತಿಯಿಂದ ನೀಡಬೇಕಾದ ಮಾಹಿತಿಗಳನ್ನು ಪಡೆಯುವುದು/ ತಿಳಿಸುವುದು. ಇಲಾಖೆಯಿಂದ ನೀಡಬೇಕಾದ ತರಬೇತಿಗಳನ್ನು ಆಯೋಜಿಸಲು ಡಯಟ್ ಹಂತದಲ್ಲಿ ಶಿಕ್ಷಕರನ್ನು ತರಬೇತಿಗೆ ನಿಯೋಜಿಸಲು ಹಾಗೂ ತರಬೇತಿ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಬಿ.ಇ.ಒ/ಬಿ.ಆರ್.ಸಿ ಗಳ ಹಂತದಲ್ಲಿ ಕಾರ್ಯಪ್ರವೃತ್ತರಾಗಲು ಸಲಹೆ-ಸೂಚನೆಗಳನ್ನು ನೀಡಲು ಡಯಟ್ಗಳ ಸಹಕಾರ ಪಡೆಯಲಾಗುತ್ತದೆ.

ಪ್ರೌಢವಿಭಾಗ

ಶಾಖೆಯ ಹೆಸರು: ಎಸ್.ಎಸ್.ಕೆ ಪ್ರೌಢ ವಿಭಾಗ (ಸಮಗ್ರ ಶಿಕ್ಷಣ ಕರ್ನಾಟಕ)

ಪೀಠಿಕೆ: ಈ ವಿಭಾಗವು 9 ರಿಂದ 10ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರಿಗೆ ಸೇವಾನಿರತ ವೃತ್ತಿಪರ ತರಬೇತಿಗಳನ್ನು ನೀಡುವುದಾಗಿದೆ.

ಧ್ಯೆಯೋದ್ದೇಶಗಳು : ಶಿಕ್ಷಕರಿಗೆ ಅವರ ವೃತ್ತಿಯಲ್ಲಿ ನೈಪುಣ್ಯತೆ ಪಡೆಯಲು ವಿಷಯಾಧಾರಿತವಾದ ತರಬೇತಿ ನೀಡುವುದಾಗಿದೆ, ಆ ಮೂಲಕ ಶಿಕ್ಷಕರನ್ನು ವಿಷಯ ಸಂಪದ್ಭರಿತರನ್ನಾಗಿ ಮಾಡುವ ಉದ್ದೇಶ ಹೊಂದಿದೆ ಶಿಕ್ಷಕರನ್ನು ಮಾನಸಿಕ ಮತ್ತು ದೈಹಿಕ ಹಾಗೂ ಸಾಮಾಜಿಕವಾಗಿ ಸದೃಢರನ್ನಾಗಿ ಮಾಡಲು ಯೋಗ, ಸಾಮಾನ್ಯ ವಿಷಯಗಳ ತರಬೇತಿಗಳನ್ನು ನೀಡಲಾಗುತ್ತದೆ. ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಿಸುವ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಶಾಖೆಯ ಪ್ರಮುಖ ಚಟುವಟಿಕೆಗಳು: ಪಿ.ಎ.ಬಿ ಹಾಗೂ ಎನ್.ಸಿ.ಇ.ಆರ್.ಟಿಯಿಂದ ಅನುಮೋದಿತವಾದ ತರಬೇತಿಗಳನ್ನು ಅವರ ಮಾರ್ಗದರ್ಶನದಂತೆಯೇ ಭೌತಿಕ ಹಾಗೂ ಆರ್ಥಿಕ ಗುರಿಯನ್ನು ನಿಗದಿಪಡಿಸಿಕೊಂಡು ಅದರನ್ವಯ ರಾಜ್ಯದ ಎಲ್ಲಾ ಡಯಟ್ಗಳು ಹಾಗೂ ಸಿ.ಟಿ.ಇ ಗಳ ಮುಖಾಂತರ ಶೈಕ್ಷಣಿಕ ಸಾಲಿನಲ್ಲಿ ತರಬೇತಿಗಳನ್ನು ನೀಡಲಾಗುತ್ತದೆ.

5. ಶಾಖೆಯ ಪ್ರಮುಖ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು:

  • NEP- 2020ರ ಆಶಯದಂತೆ ನಿಷ್ಠಾ 2.0 ಕಾರ್ಯಕ್ರಮ
  • ಸರ್ಕಾರದಿಂದ ಅನುಮೋದಿತವಾದ ಕಾರ್ಯಕ್ರಮವಾಗಿರುವ IISc ಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದ ವಿಷಯಾಧಾರಿತ ತರಬೇತಿ.

ಶಾಖೆಯ ಪ್ರಮುಖ ಕಾರ್ಯಕ್ರಮಗಳ ಪ್ರಗತಿ:

  • ನಿಷ್ಠಾ 2.0 ತರಬೇತಿಯ ಎಲ್ಲಾ 12 ಕೋರ್ಸ್ ಗಳು ಮೇ 2022 ಅಂತ್ಯಕ್ಕೆ ಪೂರ್ಣಗೊಂಡಿವೆ. ಉಸ್ತುವಾರಿ ಅಧಿಕಾರಿ ವರ್ಗದವರು ಸಹ ತರಬೇತಿ ಪಡೆಯುತ್ತಿದ್ದಾರೆ. 31-05-2022ಕ್ಕೆ ತರಬೇತಿಯು ಅಂತ್ಯಗೊಂಡಿದ್ದು, ಕೋರ್ಸ್ ವಾರು ಸರ್ಟಿಫಿಕೆಟ್ ಪಡೆದವರ ಸಂಖ್ಯೆ ಹೀಗಿದೆ. ಕೋರ್ಸ್ 01 – 61261, ಕೋರ್ಸ್ 02- 61205, ಕೋರ್ಸ್ 03- 60782, ಕೋರ್ಸ್ 04-61179, ಕೋರ್ಸ್ 05- 60531, ಕೋರ್ಸ್ 06 – 60284, ಕೋರ್ಸ್ 07-60034, ಕೋರ್ಸ್ 08- 59942, ಕೋರ್ಸ್ 09-62525, ಕೋರ್ಸ್ 10-56654, ಕೋರ್ಸ್ 11- 55641, ಕೋರ್ಸ್ 12-54165 ಒಟ್ಟು 714203 ಜನ ತರಬೇತಿ ಪಡೆದಿದ್ದಾರೆ.
  • IISc- ಕುದಾಪುರ ಸಂಸ್ಥೆಯಿಂದ ಗಣಿತ ಮತ್ತು ವಿಜ್ಞಾನ ಬೋಧಿಸುವ ಶಿಕ್ಷಕರಿಗೆ 10 ದಿನಗಳ ಸನಿವಾಸ ತರಬೇತಿಯು ವಿಷಯಧಾರಿತ ತರಬೇತಿಯಾಗಿರುತ್ತದೆ. 2022-23 ನೇ ಸಾಲಿಗೆ MOU ಮಾಡಿಕೊಂಡು ತರಬೇತಿ ಮುಂದುವರೆಸುವ ಪ್ರಕ್ರಿಯೆ ನಡೆಯುತ್ತಿದೆ.

ಶಾಖೆಯಿಂದ ನಿರ್ವಹಿಸಲಾಗುತ್ತಿರುವ ತರಬೇತಿಗಳ ವಿವರ:

  • ನಿಷ್ಠಾ 2.0 ತರಬೇತಿ:

    ಇದು NEP- 2020ರ ಆಶಯದಂತೆ ಪ್ರೌಢಶಾಲೆಗಳಲ್ಲಿ ಬೋಧಿಸುತ್ತಿರುವ ಎಲ್ಲಾ ವರ್ಗದ ಶಿಕ್ಷಕರು ಹಾಗೂ ತತ್ಸಬಂಧ ಅಧಿಕಾರಿಗಳಿಗೆ ದೀಕ್ಷಾ ಪೊರ್ಟಲ್ ಮೂಲಕ ನೀಡುವ ಆನ್ ಲೈನ್ ತರಬೇತಿಯಾಗಿದೆ. ಇದರಲ್ಲಿ ಒಟ್ಟು 12 ಜೆನರಿಕ್ ಕೋರ್ಸ್ ಗಳು ಹಾಗೂ 1 ಪೆಡಗಾಜಿಗೆ ಸಂಬಂಧಿಸಿದ ಕೋರ್ಸ್ಗಳನ್ನು ಎಲ್ಲರೂ ಕನಿಷ್ಠ ಶೇ. 70 ಅಂಕಗಳೊಂದಿಗೆ ಉತ್ತೀರ್ಣರಾಗಬೇಕು ದೀಕ್ಷಾ ಪೊರ್ಟಲ್ ನಲ್ಲಿ ಪ್ರತಿ ತಿಂಗಳು 3 ಕೋರ್ಸ್ಗಳನ್ನು ಹಾಗೂ ಅಂತಿಮವಾಗಿ 1 ಪೆಡಗಾಜಿ ಕೋರ್ಸನ್ನು ಬಿಡುಗಡೆ ಮಾಡಲಾಗುತ್ತದೆ ಮೇ- 2020ರ ಅಂತ್ಯಕ್ಕೆ ಎಲ್ಲಾ 12 ಕೋರ್ಸ್ಗಳನ್ನು ಮುಗಿಸುವ ಅವಧಿ ಮುಕ್ತಾಯವಾಗಿದೆ. 1 ಪೆಡಗಾಜಿ ಕೋರ್ಸ್ನ್ನು ಇನ್ನೂ ಬಿಡುಗಡೆ ಮಾಡಬೇಕಾಗಿದೆ, ಶಿಕ್ಷಕರು ಪ್ರತಿ ಕೋರ್ಸ್ನ್ನು ಶೇ. 70 ಅಂಕಗಳೊಂದಿಗೆ ಉತ್ತೀರ್ಣರಾದ ನಂತರ ಆನ್ ಲೈನ್ನಲ್ಲಿಯೇ ಅವರಿಗೆ ಸರ್ಟಿಫಿಕೆಟ್ ಸಹ ದೊರೆಯುತ್ತಿದೆ.ಇದು ಕನ್ನಡ, ಇಂಗ್ಲಿಷ್ ಮತ್ತು ಉರ್ದು ಮಾಧ್ಯಮದಲ್ಲಿ ಲಭ್ಯವಿದೆ.

  • IISc- ಕುದಾಪುರ ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ, ಈ ಸಂಸ್ಥೆಯಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಗಣಿತ ಹಾಗೂ ವಿಜ್ಞಾನ ಬೋಧಿಸುವ ಶಿಕ್ಷಕರಿಗೆ 10 ದಿನಗಳ ಸನಿವಾಸ ಹಾಗೂ ಮುಖಾಮುಖಿ ತರಬೇತಿಯು, ವಿಷಯಾಧಾರಿತವಾಗಿರುತ್ತದೆ. ಇಲ್ಲಿ ಶಿಕ್ಷಕರಿಗೆ ವಿಷಯದ ಬಗ್ಗೆ ಪ್ರಭುತ್ವ ದೊರೆಯುವುದರ ಜೊತೆಗೆ ತರಗತಿಯ ಕೋಣೆಗಳಲ್ಲಿ ಮಕ್ಕಳಿಗೆ ಪ್ರಾಯೋಗಿತವಾಗಿ ಅರ್ಥ ಮಾಡಿಸಲು ಸಹಕಾರಿಯಾಗುತ್ತದೆ.

ತರಬೇತಿಯ ಮೂರು ವರ್ಷಗಳ ಅಂಕಿಅಂಶಗಳು:

ಕ್ರ. ಸಂ ತರಬೇತಿಯ ಹೆಸರು
2020-21
2021-22
2022-23
ಗುರಿ ಸಾಧನೆ ಗುರಿ ಸಾಧನೆ ಗುರಿ ಸಾಧನೆ
1 ನಿಷ್ಠಾ 2.0 - - 58249 54165 - -
2 IISc 464 464 1000 1002 400 358

ಡಯಟ್ನೊಂದಿಗೆ ನಿಮ್ಮ ಶಾಖೆಯ ಕಾರ್ಯನಿರ್ವಹಣೆಯ ವಿವರ

ಇಲಾಖೆಯಿಂದ ನೀಡಬೇಕಾದ ತರಬೇತಿಗಳನ್ನು ಆಯೋಜಿಸಲು ಡಯಟ್ ಹಂತದಲ್ಲಿ ಶಿಕ್ಷಕರನ್ನು ತರಬೇತಿಗೆ ನಿಯೋಜಿಸಲು ಹಾಗೂ ತರಬೇತಿ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಬಿ.ಇ.ಒ/ ಬಿ.ಆರ್.ಸಿಗಳ ಹಂತದಲ್ಲಿ ಕಾರ್ಯಪ್ರವೃತ್ತರಾಗಲು ಸಲಹೆ- ಸೂಚನೆಗಳನ್ನು ನೀಡಲು ಡಯಟ್ಗಳ ಸಹಕಾರ ಪಡೆಯಲಾಗುತ್ತದೆ.

ಡಯಟ್ಗಳ ಪ್ರಾಂಶುಪಾಲರು ಹಾಗೂ ಎಸ್.ಎಸ್.ಕೆ ಪ್ರೌಢ ವಿಭಾಗದ ನೋಡಲ್ ಅಧಿಕಾರಿಗಳ ಸಂಪರ್ಕ ಡಿ.ಎಸ್.ಇ.ಆರ್.ಟಿ ವತಿಯಿಂದ ನೀಡಬೇಕಾದ ಮಾಹಿತಿಗಳನ್ನು ಪಡೆಯುವುದು.

ಶಿಕ್ಷಕರ ತರಬೇತಿಗಳ ಕ್ರಿಯಾಯೋಜನೆ, ತರಬೇತಿಯ ಅನುಷ್ಠಾನ, ಆಯೋಜನೆ, ಪ್ರಗತಿ ಪರಿಶೀಲನೆ, ಇ- ಮೇಲ್ ಗಳನ್ನು ಪ್ರತಿನಿತ್ಯ ವೀಕ್ಷಿಸಿ, ಅದರನ್ವಯ ಕಾರ್ಯನಿರ್ವಹಿಸುವುದು, ಇ- ಮೇಲ್ ಗಳಿಗೆ ಪ್ರತಿಕ್ರಿಯಿಸುವುದು.

ಸಾಪ್ಟ್ ಪ್ರತಿಗಳ ದಾಖಲೆಗಳ ನಿರ್ವಹಣೆ, ಮಾಡ್ಯೂಲ್ ಗಳ ತಯಾರಿ, ನಿಷ್ಠಾ 2.0 ಮಾಡ್ಯೂಲ್ ಕೋರ್ಸ್ ಗಳ ಭಾಷಾಂತರಕ್ಕೆ ಸಂಬಂಧಿಸಿದಂತೆ ತಪ್ಪುಗಳು/ ಕಾಗುಣಿತ ದೋಷಗಳು/ ಕಂಟೆಂಟ್ ದೋಷಗಳನ್ನು ತಿದ್ದುವ ಕಾರ್ಯವನ್ನು ನಿರ್ವಹಿಸುವುದು. ಡಯಟ್ ಗಳು ಹಾಗೂ ಸಿ.ಟಿ.ಇ ಗಳು ನಮ್ಮ ವಿಭಾಗದ ತರಬೇತಿಗೆ ಸಂಬಂಧಪಟ್ಟಂತೆ ಸಲ್ಲಿಸಬೇಕಾದ ಹಾರ್ಡ್ ಪ್ರತಿಗಳು ಹಾಗೂ ಸಾಪ್ಟ್ ಪ್ರತಿಗಳ ದಾಖಲೆಗಳನ್ನು ನಿರ್ವಹಿಸುವುದು.

NTSE

ಪರಿಚಯ

ಈ ಎನ್‌ಟಿಎಸ್‌ಇ / ಎನ್‌ಎಂಎಂಎಸ್ ವಿಭಾಗದಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ,ಅವರ ಪ್ರತಿಭೆಯನ್ನು ಪೋಷಿಸಲು ಹಾಗು ಡ್ರಾಪ್‌ಔಟ್ ದರಗಳನ್ನು ಕಡಿಮೆ ಮಾಡಲು ಎನ್‌ಸಿಇಆರ್‌ಟಿ ನವದೆಹಲಿ ಮತ್ತು ಶಿಕ್ಷಣ ಸಚಿವಾಲಯ ನವದೆಹಲಿ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿವೇತನದ ರೂಪದಲ್ಲಿ ಹಣಕಾಸಿನ ನೆರವು ನೀಡುವ ಮೂಲಕ ಅವರನ್ನು ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಏರಲು ಪ್ರೇರೇಪಿಸುವುದು.

ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ವಿವಿಧ ಚಟುವಟಿಕೆಗಳ ಮೂಲಕ ಉತ್ತೇಜಿಸಲು ಹಾಗು ಮಾನಸಿಕ ಮತ್ತು ದೈಹಿಕ ಆರೋಗ್ಯಕರ ಬೆಳವಣಿಗೆಗೆ ಅನುಕೂಲಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗುವುದು.

ಉದ್ದೇಶಗಳು

  1. ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು
  2. ಆರೋಗ್ಯಕರ ನಡವಳಿಕೆಯ ಅಭ್ಯಾಸಗಳನ್ನು ಉತ್ತೇಜಿಸುವುದು.
  3. ವಯಸ್ಸಿಗೆ ಸೂಕ್ತವಾದ ಆರೋಗ್ಯ ಶಿಕ್ಷಣವನ್ನು ನೀಡುವುದು.
  4. ಹದಿಹರೆಯದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು.
  5. ಮೌಲ್ಯಗಳನ್ನು ಅಳವಡಿಸುವುದು.

10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ (National Talent Search Examination, NTSE) ಎಂಬ ಸ್ಪರ್ಧಾತ್ಮಕ ಪರೀಕ್ಷೆಯನ್ನು NCERT, New Delhi, ರವರ ಮಾರ್ಗದರ್ಶನದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

NTSE ಪರೀಕ್ಷೆಗೆ ಅರ್ಹತೆ (Eligibility) :- ರಾಜ್ಯ ಸರ್ಕಾರದಿಂದ ಹಾಗು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಗಳ,10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.

NTSE ಪರೀಕ್ಷೆಯ ಉದ್ದೇಶಗಳು:

  • 10 ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುದು.
  • ಆಯ್ಕೆಯಾದವರಿಗೆ ಆರ್ಥಿಕ ನೆರವು ನೀಡಿ, ಪ್ರತಿಭೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು.
  • ಈ ಮೂಲಕ ಮಕ್ಕಳಲ್ಲಿ ಉತ್ತಮವಾಗಿ ದೇಶಸೇವೆ ಮಾಡುವ ಮನೋಭಾವ ಬೆಳೆಸುವುದು.

ಈ ಪರೀಕ್ಷೆಯು ಎರಡು ಹಂತದಲ್ಲಿ ನಡೆಯುತ್ತದೆ.

ಪ್ರಥಮ ಹಂತ: ಪ್ರಥಮ ಹಂತದ ಪರೀಕ್ಷೆಯನ್ನು ಪ್ರತಿ ವರ್ಷ ಸಾಮಾನ್ಯವಾಗಿ ನವೆಂಬರ್ ತಿಂಗಳಿನಲ್ಲಿ ನಡೆಸಲಾಗುತ್ತದೆ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ನಡೆಸಲಾಗುತ್ತದೆ NTSE ಪರೀಕ್ಷೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಂಗ ಸಂಸ್ಥೆಯಾದ KSQAAC ವತಿಯಿಂದ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ: kseeb.kar.nic.in Contact No: 08023341615, 235662283, 29720300

ಮೊದಲನೇ ಹಂತದ ಪರೀಕ್ಷೆಯು 2 ವಿಷಯಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ,

  • ಅ) ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ General Mental Ability Test (GMAT)
  • ಈ ಪತ್ರಿಕೆಯಲ್ಲಿ 100 ಬಹುಅಂಶ ಆಯ್ಕೆ ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೂ ಒಂದು ಅಂಕದಂತೆ 100 ಅಂಕಗಳು. ವಿದ್ಯಾರ್ಥಿಗಳು ಕಾರಣ ನೀಡುವ, ವಿಶ್ಲೇಷಿಸುವ , ಸಂಶ್ಲೇಶಿಸುವ ಇತ್ಯಾದಿ ಸಾಮರ್ಥ್ಯಗಳನ್ನು ಅಳೆಯುವ ಪ್ರಶ್ನೆಗಳಿರುತ್ತವೆ.
  • ಆ) ವ್ಯಾಸಂಗ ಪ್ರವೃತ್ತಿ ಪರೀಕ್ಷೆ: Scholastic Aptitude Test (SAT)
  • ಈ ಪತ್ರಿಕೆಯಲ್ಲಿ 100 ಅಂಕಗಳಿಗೆ ಒಟ್ಟು 100 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಇವುಗಳಲ್ಲಿ 40 ಪ್ರಶ್ನೆಗಳು ಸಮಾಜ ವಿಜ್ಞಾನ (ಇತಿಹಾಸ, ಭೂಗೋಳ, ಪೌರನೀತಿ ಮತ್ತು ಅರ್ಥಶಾಸ್ತ್ರ್ರ ವಿಷಯಗಳನ್ನು) 40 ಪ್ರಶ್ನೆಗಳು ಸಾಮಾನ್ಯ ವಿಜ್ಞಾನ (ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಮತ್ತು ಜೀವಶಾಸ್ರ್ತ ) ಮತ್ತು 20 ಪ್ರಶ್ನೆಗಳು (ಗಣಿತ ವಿಷಯವನ್ನು ಆಧರಿಸಿರುತ್ತವೆ)

ಈ ವಿಷಯದ ಪರೀಕ್ಷೆಗೆ ಸಿದ್ಧವಾಗುವಾಗ ವಿದ್ಯಾರ್ಥಿಗಳು 10ನೇ ತರಗತಿಯ ಪಠ್ಯವಸ್ತು( State/CBSC/ICSE, Syllabus) ಚೌಕಟ್ಟಿನಲ್ಲಿರುವ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ State Rank ಆಧಾರದ ಮೇಲೆ ವಿದ್ಯಾರ್ಥಿಗಳನ್ನು ದ್ವಿತೀಯ ಹಂತದ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.

ದ್ವಿತೀಯ ಹಂತ (Second Phase)

ಪ್ರಥಮ ಹಂತದ ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಅರ್ಹತೆಗಳಿಸಿದ ವಿದ್ಯಾರ್ಥಿಗಳಿಗೆ National Council of Educational Research and Training, NCERT, New Delhi ರವರು ದ್ವಿತೀಯ ಹಂತದ ರಾಷ್ಟ್ರ ಮಟ್ಟದ ಪರೀಕ್ಷೆಯನ್ನು ನಡೆಸುತ್ತಾರೆ. ದ್ವಿತೀಯ ಹಂತದ ಪರೀಕ್ಷೆ ವಿವರಗಳಿಗೆ NCERT Website ನಲ್ಲಿ ವೀಕ್ಷಿಸುವುದು.

ವಿದ್ಯಾರ್ಥಿ ವೇತನ : ಅಂತಿಮವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಿ.ಯು.ಸಿ ( ಪ್ರಥಮ ಮತ್ತು ದ್ವಿತೀಯ ) ಯಲ್ಲಿ ತಿಂಗಳಿಗೆ ರೂ 1,250 ಮತ್ತು ಪದವಿ ಹಂತದಲ್ಲಿ ರೂ 2,000 ಹಾಗೂ ಉನ್ನತ ವ್ಯಾಸಂಗದಲ್ಲಿ ವಿದ್ಯಾರ್ಥಿವೇತನ ಯು.ಜಿ.ಸಿ ನಿಯಮಾನುಸಾರ ನೀಡಲಾಗುತ್ತದೆ.

YEAR WISE STATISTICS OF NTS EXAMINATION
Sl No Year of ExamNo of Students Registered No of Students Appeared No of Students Qualified at State LevelNo of Students Qualified at National Level
12018-1910317798689395181
22019-20123101116382393165
32020-21161353154899385135
42021-22Yet to be conducted
NMMS

National Means cum Merit Scholarship Examination, NMMS, ಸ್ಪರ್ಧಾತ್ಮಕ ಪರೀಕ್ಷೆಯನ್ನು ಶಿಕ್ಷಣಮಂತ್ರಾಲಯದ ಮಾರ್ಗದರ್ಶನದಂತೆ ನಡೆಸಲಾಗುತ್ತದೆ.

2019-20ನೇ ಸಾಲಿನ NMMS ಪರೀಕ್ಷೆಯನ್ನು ದಿನಾಂಕ: 03-11-2019 ರಂದು ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಂಗ ಸಂಸ್ಥೆಯಾದ KSQAAC ವತಿಯಿಂದ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ: kseeb.kar.nic.in Contact No: 08023341615, 235662283, 29720300

ಅರ್ಹತೆ (Eligibility) :

ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8 ನೇ ತರಗತಿ ವಿದ್ಯಾರ್ಥಿಗಳು ಮಾತ್ರ NMMS ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಿಂದ ನಡೆಯುವ ವಸತಿಯುತ ಶಾಲೆಗಳ ವಿದ್ಯಾರ್ಥಿಗಳು ಅರ್ಹರಿರುವುದಿಲ್ಲ. (ಉದಾ: ಮೊರಾರ್ಜಿ, ನವೋದಯ ಶಾಲೆ ಕೇಂದ್ರಿಯ ವಿದ್ಯಾಲಯ, ಸೈನಿಕ ಶಾಲೆ, ಇತ್ಯಾದಿ)

ಯೋಜನೆಯ ಉದ್ದೇಶಗಳು :

  • 8 ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುದು.
  • ಗುರ್ತಿಸಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮುಂದುವರಿಕೆಗೆ ವಿದ್ಯಾರ್ಥಿವೇತನ ನೀಡುವುದು ( ಹಣಕಾಸಿನ ನೆರವು).
  • ಪ್ರತಿಭಾವಂತ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ತಡೆದು ಅವರ ವಿದ್ಯಾಭ್ಯಾಸ ಮುಂದುವರಿಕೆಗೆ ಪ್ರೇರೇಪಿಸುವುದು.

NMMS ಪರೀಕ್ಷೆಗೆ ಇರುವ ನಿಬಂಧನೆಗಳು :

  • ಪೋಷಕರ ವಾರ್ಷಿಕ ವರಮಾನ 3,50,000 ಮೀರಿರಬಾರದು.
  • 7 ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 55 ಅಂಕಗಳನ್ನು (ಅಥವಾ ಗ್ರೇಡ್) ಪಡೆದಿರಬೇಕು.
  • ಪ.ಜಾ/ಪ.ಪಂ ಹಾಗೂ ವಿಕಲ ಚೇತನ ವಿದ್ಯಾರ್ಥಿಗಳಿಗೆ ಶೇ 5 ರಷ್ಟು ವಿನಾಯಿತಿ ಇರುತ್ತದೆ.

ಆಯ್ಕೆ ಪ್ರಕ್ರಿಯೆ (Selection Procedure)

ಈ ಪರೀಕ್ಷೆಯು ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

  • ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ General Mental Ability Test (GMAT)
  • ಈ ಪತ್ರಿಕೆಯಲ್ಲಿ 90 ಬಹುಅಂಶ ಆಯ್ಕೆ ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೂ ಒಂದು ಅಂಕದಂತೆ 90 ಅಂಕಗಳು. ವಿದ್ಯಾರ್ಥಿಗಳು ಕಾರಣ ನೀಡುವ, ವಿಶ್ಲೇಷಿಸುವ , ಸಂಶ್ಲೇಶಿಸುವ ಇತ್ಯಾದಿ ಸಾಮರ್ಥ್ಯಗಳನ್ನು ಅಳೆಯುವ ಪ್ರಶ್ನೆಗಳಿರುತ್ತವೆ.
  • ವ್ಯಾಸಂಗ ಪ್ರವೃತ್ತಿ ಪರೀಕ್ಷೆ: Scholastic Aptitude Test (SAT)
  • ಈ ಪತ್ರಿಕೆಯಲ್ಲಿ ಒಟ್ಟು 90 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಇವುಗಳಲ್ಲಿ 35 ಪ್ರಶ್ನೆಗಳು (ಸಾಮಾಜಿಕ ವಿಜ್ಞಾನ ವಿಷಯಗಳಾದ ಇತಿಹಾಸ , ಭೂಗೋಳ, ಪೌರನೀತಿ ಮತ್ತು ಅರ್ಥಶಾಸ್ತ್ರ್ರ ವಿಷಯಗಳನ್ನು) 35 ಪ್ರಶ್ನೆಗಳು (ವಿಜ್ಞಾನ ವಿಷಯಗಳಾದ ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಮತ್ತು ಜೀವಶಾಸ್ರ್ತ ) ಮತ್ತು 20 ಪ್ರಶ್ನೆಗಳು (ಗಣಿತ ವಿಷಯವನ್ನು ಆಧರಿಸಿರುತ್ತವೆ.) ಪ್ರತಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ ಜಿಲ್ಲಾವಾರು, ಪ್ರವರ್ಗವಾರು rank ಆಧಾರಿತವಾಗಿ ಆಯ್ಕೆ ಮಾಡಲಾಗುತ್ತದೆ.

ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ 9 ನೇ ತರಗತಿಯಿಂದ ತಿಂಗಳಿಗೆ ರೂ 1000 ರಂತೆ ವರ್ಷಕ್ಕೆ 12,000/- ಗಳಂತೆ 4 ವರ್ಷಗಳು ವಿದ್ಯಾರ್ಥಿವೇತನ ಸಿಗುತ್ತದೆ. (ದ್ವಿತೀಯ ಪಿ.ಯು.ಸಿ ಯವರೆಗೆ)

ವಿದ್ಯಾರ್ಥಿವೇತನ ವಿತರಣೆ :- ಆಯ್ಕೆಯಾದ ವಿದ್ಯಾರ್ಥಿಗಳ ಹೆಸರಿನಲ್ಲಿ ತೆರೆಯುವ ಬ್ಯಾಂಕ್, ಖಾತೆಗೆ ನೇರವಾಗಿ ಎಸ್.ಬಿ.ಐ, ನವದೆಹಲಿಯಿಂದ ವಿದ್ಯಾರ್ಥಿವೇತನ ಜಮಾ ಆಗುತ್ತದೆ.

ವಿದ್ಯಾರ್ಥಿವೇತನ ಮುಂದುವರಿಕೆಗೆ ನಿಬಂಧನೆಗಳು: NMMS ಪರೀಕ್ಷೆಯಲ್ಲಿ ಆಯ್ಕೆಯಾದ ಮೇಲೆ ವಿದ್ಯಾರ್ಥಿ ವೇತನ ಮುಂದುವರಿಕೆಗೆ ಶೈಕ್ಷಣಿಕ ಹಿರಿಮೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಕೆಳಗಿನ ನಿಬಂಧನೆಗಳನ್ನು ಒಳಗೊಂಡಿರುತ್ತದೆ.

  • ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು 9, 11 ಮತ್ತು 12 ನೇ ತರಗತಿಗಳಲ್ಲಿ ಮೊದಲನೇಬಾರಿಯೇ ತೇರ್ಗಡೆ ಹೊಂದಬೇಕಾಗಿರುತ್ತದೆ ಮತ್ತು 10 ನೇ ತರಗತಿಯಲ್ಲಿ ಕನಿಷ್ಟ ಶೇ60 ರಷ್ಟು ಅಂಕಗಳನ್ನು ಗಳಿಸಲೇಬೇಕಾಗುತ್ತದೆ. (ಪ.ಜಾತಿ / ಪ. ಪಂ ವಿದ್ಯಾರ್ಥಿಗಳಿಗೆ ಶೇ5 ರಷ್ಟು ವಿನಾಯಿತಿ ನೀಡಲಾಗುತ್ತದೆ.) MHRD, ನವದೆಹಲಿರವರ ಸೂಚನೆಯಂತೆ ನಿಬಂಧನೆಗಳು ಆಗಿಂದಾಗ್ಗೆ ಬದಲಾಗುತ್ತವೆ.
  • ಆಯ್ಕೆಯಾದ ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಅನುದಾನಿತ ಶಾಲೆ / ಕಾಲೇಜಿನಲ್ಲಿ ಮಾತ್ರ ವಿದ್ಯಾಭ್ಯಾಸ ಮುಂದುವರಿಸಬೇಕು.
  • ITI ಹಾಗೂ Diploma ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುವುವರು ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುವುದಿಲ್ಲ.
YEAR WISE STATISTICS OF NMMS EXAMINATION
SL No Year ExamNo of Students Registered No of Students AppearedNo of students Qualified at State Level
12018-191260291200775375
22019-201308771236885455
32020-211281261253924273
42021-221895791866795505
ರಾಷ್ಟೀಯ ಜನಸಂಖ್ಯಾ ಶಿಕ್ಷಣ ಯೋಜನೆ (ಎನ್.ಪಿ.ಇ.ಪಿ.)

ಶಾಲಾ ಶಿಕ್ಷಣವು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಇದು ಜ್ಞಾನವನ್ನು ಪಡೆದುಕೊಳ್ಳಲು, ಪರಿಕಲ್ಪನೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಬೌದ್ಧಿಕ ಬೆಳವಣಿಗೆಗೆ ಮತ್ತು ಅವರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಅನುಕೂಲಕರವಾದ ವರ್ತನೆಗಳು, ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ. ಯೋಜನೆಯ ಗುರಿ (NPEP):

ಆರೋಗ್ಯ ಕಾಳಜಿ ಮತ್ತು ಸಕಾರಾತ್ಮಕ ವರ್ತನೆಗಳಿಗೆ ಸಂಬಂಧಿಸಿದ ಜೀವನ ಕೌಶಲ್ಯಗಳ ಅಭಿವೃದ್ಧಿಯೇ ಹದಿಹರೆಯದ ಶಿಕ್ಷಣದ ಮುಖ್ಯ ಗುರಿ.

ಕೌಶಲ್ಯ ಅಭಿವೃದ್ಧಿಯ ಗುರಿಯನ್ನು ಹೊಂದಿರುವ ಸೂಕ್ತವಾದ ವಿನ್ಯಾಸದ ಪಠ್ಯಕ್ರಮ ಚಟುವಟಿಕೆಗಳು ಕಲಿಯುವವರಿಗೆ ವೈಯಕ್ತಿಕ ಆಧಾರದ ಮೇಲೆ ಅಥವಾ ಗುಂಪುಗಳಲ್ಲಿ ಕಲಿಕೆಯ ಅನುಭವಗಳಲ್ಲಿ ಭಾಗವಹಿಸಲು ಅವಕಾಶಗಳನ್ನು ಒದಗಿಸಬಹುದು. ಅಲ್ಲಿ ಚಟುವಟಿಕೆಗಳು "ಅನುಭವಿ ಕಲಿಕೆ"ಗೆ ವಿಶೇಷ ಒತ್ತು ನೀಡುತ್ತವೆ. ಇದು ಕಲಿಕೆಯನ್ನು ಹೆಚ್ಚು ಹೀರಿಕೊಳ್ಳುವ, ಅರ್ಥಪೂರ್ಣವಾಗಿರುವ ಅನುಭವವನ್ನು ಮತ್ತಷ್ಟೂ ಗಟ್ಟಿಗೊಳಿಸುತ್ತದೆ.

ಯೋಜನೆಯ ಉದ್ದೇಶ:

ಈ ಯೋಜನೆಯು ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಣೆಯ ಅಂಶಗಳಲ್ಲಿ ಒಂದಾಗಿದೆ.

ಜೀವನ ಕೌಶಲ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವ ಹದಿಹರೆಯದ ಶಿಕ್ಷಣದ ಏಕೀಕರಣ.

ಹೊಸ ಜನಸಂಖ್ಯೆಯ ಏಕೀಕರಣ ಮತ್ತು ಸುಸ್ಥಿರ ಅಭಿವೃದ್ಧಿ, ಲಿಂಗ ಸಮಾನತೆ ಮತ್ತು ಸಮಾನತೆ ಮತ್ತು ಮಹಿಳೆಯರು, ಕುಟುಂಬ, ಅದರ ಪಾತ್ರಗಳು ಮತ್ತು ಜವಾಬ್ದಾರಿಗಳು, ಆರೋಗ್ಯ ಮತ್ತು ಶಿಕ್ಷಣದ ಸಬಲೀಕರಣದಂತಹ ಅಭಿವೃದ್ಧಿ ಕಾಳಜಿಗಳು.

ಈ ಯೋಜನೆಯಡಿಯಲ್ಲಿ ಜನಸಂಖ್ಯೆ ಶಿಕ್ಷಣ ಮತ್ತು ಹದಿಹರೆಯದ ಶಿಕ್ಷಣದ ಉದ್ದೇಶವನ್ನು ಸಾಧಿಸಲು ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಪಠ್ಯಕ್ರಮ, ಪಠ್ಯಪುಸ್ತಕಗಳು, ಬೋಧನಾ ಪ್ರಕ್ರಿಯೆ, ಮೌಲ್ಯಮಾಪನ ಪ್ರಕ್ರಿಯೆ, ಸೇವಾ ಪೂರ್ವ ತರಬೇತಿ ಶಿಕ್ಷಣ, ಜೀವನ ಕೌಶಲ್ಯ ಅಭಿವೃದ್ಧಿಗಾಗಿ ಏಕೀಕರಣ ಪ್ರಕ್ರಿಯೆಯನ್ನು ಬಲಪಡಿಸಲು ಈ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.

ಚಟುವಟಿಕೆಗಳು:

ಈ ಕೆಳಕಂಡ ವಿವಿಧ ಚಟುವಟಿಕೆಗಳನ್ನು ಶಾಲಾ ಹಂತದಿಂದ ರಾಜ್ಯ ಹಂತದವರೆಗೆ ಆಯೋಜಿಸಲಾಗಿದೆ.

ಕೌಶಲ್ಯ ಅಭಿವೃದ್ಧಿಯಂತಹ ಉದ್ದೇಶಗಳನ್ನು ಸಾಧಿಸಲು ಈ ಕೆಳಗಿನ ಚಟುವಟಿಕೆಗಳನ್ನು ಆಯೋಜಿಸಬಹುದು/ನಡೆಸಬಹುದು. ಅವುಗಳೆಂದರೆ:

  • ಪ್ರಶ್ನೆ ಪೆಟ್ಟಿಗೆಯ ಚಟುವಟಿಕೆ
  • ಮೌಲ್ಯದ ಸ್ಪಷ್ಟೀಕರಣ
  • ಚರ್ಚೆ
  • ರಸಪ್ರಶ್ನೆ ಸ್ಪರ್ಧೆ
  • ಪಾತ್ರಾಭಿನಯ
  • ಗುಂಪು ಚರ್ಚೆ
  • ಉದಾಹರಣಾ ಪರಿಶೀಲನೆ
  • ಜನಪದ ನೃತ್ಯ
  • ಪ್ರಬಂಧ ಸ್ಪರ್ಧೆ/ಸೃಜನಾತ್ಮಕ ಬರವಣಿಗೆ
  • ಪೋಸ್ಟರ್ ಸ್ಪರ್ಧೆ
  • ಚರ್ಚೆಗಾಗಿ ಗ್ರಾಮ ದತ್ತು
  • ಜನಸಂಖ್ಯಾ ಶಿಕ್ಷಣ ಚಟುವಟಿಕೆ.
  • ರಾಜ್ಯದ ಎಲ್ಲಾ ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಶಾಲೆಗಳಲ್ಲಿ "ವಿಶ್ವ ಜನಸಂಖ್ಯೆ ದಿನ" ಆಚರಣೆ.
  • ರಾಜ್ಯದ ಎಲ್ಲಾ ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಶಾಲೆಗಳಲ್ಲಿ "ವಿಶ್ವ ಏಡ್ಸ್ ದಿನ" ಆಚರಣೆ.
ಸ್ಪರ್ಧೆಯ ಉದ್ದೇಶಗಳು:
  • ಪೀರ್ ಗುಂಪು, ಪೋಷಕರು ಹಾಗು ವಿರುದ್ಧ ಲಿಂಗದವರೊಂದಿಗೆ ವಿದ್ಯಾರ್ಥಿಗಳು ಅಂತರಿಕ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಶಂಸಿಸಲು ಅನುವು ಮಾಡುವುದು.
  • ಅಪಾಯದ ಸಂದರ್ಭಗಳು ಮತ್ತು ನಡವಳಿಕೆಗಳ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು.
  • ಜೀವನ ಕೌಶಲ್ಯ ಅಭಿವೃದ್ಧಿಗಾಗಿ ಅನುಭವದ ಕಲಿಕೆಗಾಗಿ ಸಂವಾದಾತ್ಮಕ ಭಾಗವಹಿಸುವಿಕೆಗಾಗಿ ಅವರಿಗೆ ಅವಕಾಶಗಳನ್ನು ಒದಗಿಸುವುದು.
  • ಅವರಲ್ಲಿ ಸ್ವಯಂ, ಇತರರನ್ನು ನಿಭಾಯಿಸಲು ಮತ್ತು ಪೀರ್ ಒತ್ತಡವನ್ನು ನಿರ್ವಹಿಸಲು ವಿವಿಧ ಜೀವನ ಕೌಶಲ್ಯಗಳನ್ನು ಅನ್ವಯಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು.
  • ಶಾಲೆಗಳಲ್ಲಿ ಹದಿಹರೆಯ ಶಿಕ್ಷಣದ ಪರಿಣಾಮಕಾರಿ ನಿರ್ವಹಣೆಗೆ ಬೇಕಾದ ವಾತಾವರಣವನ್ನು ಸೃಷ್ಟಿಸುವುದು.

2019-20 ಮತ್ತು 2020-21ನೇ ಸಾಲುಗಳಲ್ಲಿ ಕೋವಿಡ್‌ -19 ರ ಕಾರಣದಿಂದ ಸ್ಪರ್ದೆಗಳನ್ನು ಆಯೋಜಿಸಿರುವುದಿಲ್ಲ. 2021-22ನೇ ಸಾಲಿನಲ್ಲಿ virtual mode ಮುಖಾಂತರ ಸ್ಪರ್ಧೆಗಳನ್ನು ಶಾಲಾಹಂತದಿಂದ ರಾಜ್ಯಹಂತದವರೆಗೆ ಆಯೋಜಿಸಲಾಗಿರುತ್ತದೆ.

ಪಾತ್ರಾಭಿನಯ ಸ್ಪರ್ಧೆಯಲ್ಲಿ ರಾಜ್ಯಹಂತದಲ್ಲಿ

ಪ್ರಥಮ ಸ್ಥಾನ ಸರ್ಕಾರಿ ಪ್ರೌಢಶಾಲೆ. ಹೊಸದುರ್ಗ.ಚಿತ್ರದುರ್ಗ ಜಿಲ್ಲೆ,

ದ್ವಿತೀಯ ಸ್ಥಾನ- ಸರ್ಕಾರಿ ಪ್ರೌಢಶಾಲೆ.ಮರನಾಬಾದ್‌,ಹಾವೇರಿ ಜಿಲ್ಲೆ

ತೃತೀಯ ಸ್ಥಾನ - ಸರ್ಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು. ದಕ್ಷಿಣ ಕನ್ನಡ ಜಿಲ್ಲೆಗಳ ವಿದ್ಯಾರ್ಥಿಗಳು ವಿಜೇತರಾಗಿರುತ್ತಾರೆ.

ಜಾನಪದ ನೃತ್ಯ ಸ್ಪರ್ಧೆಯಲ್ಲಿ ರಾಜ್ಯಹಂತದಲ್ಲಿ

ಪ್ರಥಮ ಸ್ಥಾನ ಸರ್ಕಾರಿ ಪ್ರೌಢಶಾಲೆ ಮರನಾಬಾದ್‌ ಹಾವೇರಿ ಜಿಲ್ಲೆ. ,

ದ್ವಿತೀಯ ಸ್ಥಾನ- ಸರ್ಕಾರಿ ಬಾಲಕಿಯರ ಪ್ರೌಢಶಾಲೆ ತಿರ್ಥಹಳ್ಳಿ.ಶಿವಮೊಗ್ಗ ಜಿಲ್ಲೆ

ತೃತೀಯ ಸ್ಥಾನ - ಸರ್ಕಾರಿ ಪ್ರೌಢಶಾಲೆ ಯೆಮನೂರು. ದಕ್ಷಿಣ ಕನ್ನಡ ಜಿಲ್ಲೆಗಳ ವಿದ್ಯಾರ್ಥಿಗಳು ವಿಜೇತರಾಗಿರುತ್ತಾರೆ

ಪೋಸ್ಟರ್‌ ಸ್ಪರ್ಧೆಯಲ್ಲಿ ರಾಜ್ಯಹಂತದಲ್ಲಿ

ಪ್ರಥಮ ಸ್ಥಾನ- ಸರ್ಕಾರಿ ಪದವಿ ಪೂರ್ವ ಕಾಲೇಜು.ಕಲ್ಲಹಳ್ಳಿ. ಭದ್ರಾವತಿ, ಶಿವಮೊಗ್ಗ ಜಿಲ್ಲೆ. ,

ದ್ವಿತೀಯ ಸ್ಥಾನ- ಸರ್ಕಾರಿ ಪ್ರೌಢಶಾಲೆ.ಕಾಮನಕೆರೆ. ಚಿಕ್ಕಮಂಗಳೂರು ಜಿಲ್ಲೆ

ತೃತೀಯ ಸ್ಥಾನ - ಸರ್ಕಾರಿ ಪ್ರೌಢಶಾಲೆ ಹೊಣಸಿಗೆರೆ. ತುಮಕುರು ಜಿಲ್ಲೆಗಳ ವಿದ್ಯಾರ್ಥಿಗಳು ವಿಜೇತರಾಗಿರುತ್ತಾರೆ .

ಒಟ್ಟು 22 ಜಿಲ್ಲೆಗಳಿಂದ 27,527 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ.

ಶಾಲಾ ಆರೋಗ್ಯ ಮತ್ತು ಕ್ಷೇಮ

ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ಇಲಾಖೆಯವರ ಸಹಯೋಗದೊಂದಿಗೆ " ಶಾಲಾ ಆರೋಗ್ಯ ಮತ್ತು ಕ್ಷೇಮ " ಕಾರ್ಯಕ್ರಮವನ್ನು ಸರ್ಕಾರಿ/ಅನುದಾನಿತ ಹಿರಿಯ ಪ್ರಾಥಮಿಕ ಹಾಗು ಪ್ರೌಢಶಾಲೆಗಳಲ್ಲಿ ಅನುಷ್ಟಾನಗೊಳಿಸುವುದು. ರಾಯಚೂರು ಜಿಲ್ಲೆಯ 2170 ಶಿಕ್ಷಕರಿಗೆ ಹಾಗು ಯಾದಗಿರಿ ಜಿಲ್ಲೆಯ 690 ಶಿಕ್ಷಕರಿಗೆ ತರಬೇತಿ ನೀಡಿದೆ.

ಉದ್ದೇಶಗಳು:

  • ಮಕ್ಕಳಿಗೆ ವಯಸ್ಸಿಗನುಗುಣವಾಗಿ ಆರೋಗ್ಯ ಶಿಕ್ಷಣ ಮತ್ತು ಪೌಷ್ಠಿಕ ಆಹಾರದ ಬಗ್ಗೆ ಅರಿವು ಮೂಡಿಸುವುದು
  • ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗು ಚಿಕಿತ್ಸೆ ಒದಗಿಸುವುದು.
  • ಶುದ್ದ ನೀರಿನ ಬಳಕೆಯನ್ನು ಉತ್ತೇಜಿಸುವುದು.
  • ಮಕ್ಕಳಲ್ಲಿ ಆರೋಗ್ಯಕರ ನಡವಳಿಕೆಯನ್ನು ಉತ್ತೇಜಿಸುವುದು.
  • ಹೆಣ್ಣು ಮಕ್ಕಳಿಗೆ menstrual ಹಾಗು ಶುಚಿತ್ವದ ಬಗ್ಗೆ ಅರಿವು ಮೂಡಿಸುವುದು.
  • ಯೋಗ ಮತ್ತು ಧ್ಯಾನಗಳನ್ನು ಉತ್ತೇಜಿಸುವುದು .

ಮಕ್ಕಳ ನಡವಳಿಕೆ ಹಾಗು ಜೀವನ ಕೌಶಲದ ಮೇಲೆ ಸಕರಾತ್ಮಕ ಪರಿಣಾಮ ಬೀರುವ ಥೀಮ್ ಆಧಾರಿತ ವಿಷಯಗಳನ್ನು ಆಧರಿಸಿ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಒತ್ತು ನೀಡುವುದು.

ತುರ್ತು ಪರಿಸ್ಥಿತಿ ನಿರ್ವಹಣೆಯ ಬಗ್ಗೆ ವಿವಿಧ ಇಲಾಖೆಯ ಸಹಯೋಗದೊಂದಿಗೆ ಮಕ್ಕಳಲ್ಲಿ ಅರಿವು ಮೂಡಿಸುವುದು.

ಉದಾ: ಅಗ್ನಿ ಶಾಮಕ ದಳ, ಪೋಲಿಸ್ ಇಲಾಖೆಯ ಕಾರ್ಯಕ್ರಮ, ಪ್ರಥಮ ಚಿಕಿತ್ಸೆ, ಇತ್ಯಾದಿ.

ಪೀಠಿಕೆ:

ಡಿ.ಎಸ್.ಇ.ಆರ್.ಟಿ ಯ ಸೇವಾ ಪೂರ್ವ ಶಿಕ್ಷಕ ಶಿಕ್ಷಣ ವಿಭಾಗವು ಶಾಲಾ ಪೂರ್ವ ( ಆರಂಭಿಕ ಬಾಲ್ಯ) ಶಿಕ್ಷಣ ಮತ್ತು ಪ್ರಾಥಮಿಕ ಶಾಲಾ ಹಂತಗಳಿಗೆ ಅಗತ್ಯವಿರುವ ಶಿಕ್ಷಕರನ್ನು ರೂಪಿಸಿ ಒದಗಿಸಲು ಬೇಕಾದ ಶಿಕ್ಷಕ ಶಿಕ್ಷಣ ವ್ಯವಸ್ಥೆಯ ಬಲವರ್ಧನೆಗಾಗಿ ಡಿ.ಪಿ.ಎಸ್.ಇ, ಡಿ.ಇಎಲ್.ಇಡಿ ಮತ್ತು ಡಿ.ಪಿ.ಇಡಿ ಶಿಕ್ಷಕ ಶಿಕ್ಷಣ ಕೋರ್ಸ್ಗಳಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡು ನಿರ್ವಹಿಸುತ್ತದೆ.

ಧ್ಯೇಯೋದ್ದೇಶಗಳು
  • ಶಾಲಾ ಪೂರ್ವ ಶಿಕ್ಷಕ ಶಿಕ್ಷಣ ವ್ಯವಸ್ಥೆಯ ( ಡಿ.ಪಿ.ಎಸ್.ಇ ಕೋರ್ಸ್) ಶೈಕ್ಷಣಿಕ, ಆಡಳಿತಾತ್ಮಕ ನಿರ್ವಹಣೆ ಮತ್ತು ಮೇಲ್ವಿಚಾರಣೆ.
  • ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಣದ ( ಡಿ.ಎಲ್.ಇಡಿ‌ ಕೋರ್ಸ್) ಶೈಕ್ಷಣಿಕ ಮತ್ತು ಆಡಳಿತಾತ್ಮಕ ನಿರ್ವಹಣೆ.
  • ಪ್ರಾಥಮಿಕ ಶಾಲಾ ಹಂತದಲ್ಲಿ ದೈಹಿಕ ಶಿಕ್ಷಣ ನೀಡುವ ಶಿಕ್ಷಕರನ್ನು ರೂಪಿಸಲು ಡಿ.ಪಿ.ಇಡಿ ಶಿಕ್ಷಕ ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆ.
  • ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಎಲ್ಲ ಶಿಕ್ಷಕ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶಿಕ್ಷಕರ ನಿರ್ವಹಣೆ ಮತ್ತು ಮೇಲ್ವಿಚಾರಣೆ.
  • ರಾಜ್ಯದ ಎಲ್ಲಾ ಶಿಕ್ಷಕ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶಿಕ್ಷಕರ ಮತ್ತು ಸಂಸ್ಥೆಗಳ ಮಾಹಿತಯನ್ನೊಳಗೊಂಡ SSP Portal ನ ನಿರ್ವಹಣೆ.

ವಿಭಾಗದ ಪ್ರಮುಖ ಚಟುವಟಿಕೆಗಳು
  1. ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಪರಿಷತ್ತಿನ (N C T E) ನಿಯಮ ಮತ್ತು ಮಾರ್ಗ ಸೂಚಿಗಳಂತೆ ರಾಜ್ಯದಲ್ಲಿ ಶಿಕ್ಷಕ ಶಿಕ್ಷಣ ಸಂಸ್ಥೆ (ಡಯಟ್ ,ಸರ್ಕಾರಿ ಟಿ.ಟಿ.ಐ, ಅನುದಾನಿತ ಮತ್ತು ಅನುದಾನ ರಹಿತ) ಗುಣಮಟ್ಟದ ಕಾರ್ಯನಿರ್ವಹಣೆಗಾಗಿ ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನ ಮಾಡುವುದು.
  2. ಶಿಕ್ಷಕ ಶಿಕ್ಷಣ ಕೋರ್ಸ್ ಗಳಾದ (D.El.Ed, D.P.S.E,ಮತ್ತು D.P.Ed) ಪಠ್ಯಕ್ರಮ, ಪಠ್ಯವಸ್ತು,ಸಂಪನ್ಮೂಲ ಸಾಹಿತ್ಯ ಮತ್ತು ಕಲಿಕಾ ಸಂಪನ್ಮೂಲಗಳನ್ನು ಸಿದ್ದಪಡಿಸಿ ಅನುಷ್ಠಾನಗೊಳಿಸುವಿಕೆಯನ್ನು ಖಾತರಿಪಡಿಸುವುದು.
  3. ರಾಜ್ಯದಲ್ಲಿನ ಶಿಕ್ಷಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಅಗತ್ಯವಾದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಮಾರ್ಗಸೂಚಿಗಳನ್ನು ನೀಡಿ ,ಅವುಗಳ ಅನುಪಾಲನೆಯಾಗುತ್ತಿರುವುದನ್ನು ಖಾತರಿಪಡಿಸಿಕೊಳ್ಳುವುದು.
  4. ಶಿಕ್ಷಕ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಅಗತ್ಯವಾದ ಪುನ:ಶ್ಚೇತನ ಕಾರ್ಯಕ್ರಮ ಮತ್ತು ಕಾರ್ಯಗಾರಗಳನ್ನು ರೂಪಿಸಿ ಒದಗಿಸುವುದು. ಇದಕ್ಕೆ ಪೂರಕವಾಗಿ ತರಬೇತಿ ಸಾಹಿತ್ಯಗಳಾದ ಮಾಡ್ಯೂಲ್ ಗಳು, ಕೈಪಿಡಿಗಳು ಮತ್ತು ಕಲಿಕಾ ಸಂಪನ್ಮೂಲಗಳನ್ನು ಸಿದ್ದಪಡಿಸುವುದು.
  5. ಕೇಂದ್ರೀಕೃತ ದಾಖಲಾತಿ ಘಟಕದ ಮೂಲಕ ರಾಜ್ಯದ ಎಲ್ಲಾ ಶಿಕ್ಷಕ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಲಾಗುವ ವಿವಿಧ ಕೋರ್ಸ್ಗಳಿಗೆ ವಿದ್ಯಾರ್ಥಿಗಳ ಆಯ್ಕೆ ಮತ್ತು ದಾಖಲಾತಿಗೆ ಸಂಬಂಧಿಸಿದ ನಿಯಮಗಳು ಮತ್ತು ಸೂಚನೆಗಳನ್ನು ಒದಗಿಸುವುದು.
  6. ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ವಿವಿಧ ಕೋರ್ಸ್ಗಳ ಪರೀಕ್ಷೆ ಮತ್ತು ಮೌಲ್ಯಮಾಪನ ಮಾರ್ಗಸೂಚಿಗಳನ್ನು ಒದಗಿಸುವುದು.
  7. ರಾಜ್ಯದ ವಿವಿಧ ಶಿಕ್ಷಕ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿ ಶಿಕ್ಷಕರಿಗೆ ಸ್ಟೇಟ್ ಸ್ಕಾಲರ್ಶಿಪ್ ಪೋರ್ಟಲ್ (ಎಸ್ಎಸ್ಪಿ) ಮೂಲಕ ಶುಲ್ಕ ಮರುಪಾವತಿ ಮತ್ತು ವಿದ್ಯಾರ್ಥಿ ವೇತನ ಪಡೆಯಲು ಡಯಟ್ಗಳಿಂದ SSP Portal ಕಛೇರಿಗೆ ಸಲ್ಲಿಸಲು ಕ್ರಮವಹಿಸುವುದು.
  8. ಅನುದಾನಿತ ಶಿಕ್ಷಕ ಶಿಕ್ಷನ ಸಂಸ್ಥೆಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಷಯಗಳ ಸಂಬಂಧಿತ ಕಾರ್ಯ ನಿರ್ವಹಿಸುವುದು.
  9. ಶಿಕ್ಷಕ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳನ್ನು ನಿರ್ವಹಿಸುವುದು.

ಡಯಟ್ಗಳೊಂದಿಗೆ ವಿಭಾಗದ ಕಾರ್ಯನಿರ್ವಹಣೆಯ ವಿವರ.

ಡಯಟ್ಗಳು ರಾಜ್ಯದ ವಿವಿಧ ಶಿಕ್ಷಕ ಶಿಕ್ಷಣ ಸಂಸ್ಥೆಗಳಿಗೂ ಮತ್ತು ಡಿ.ಎಸ್.ಇ.ಆರ್.ಟಿ ಯ PSTE ವಿಭಾಗಕ್ಕೂ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತವೆ.

  1. ಡಿ.ಪಿ.ಎಸ್.ಇ, ಡಿ.ಎಲ್.ಇಡಿ, ಮತು ಡಿ.ಪಿ.ಇಡಿ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶಿಕ್ಷಕರ ದಾಖಲಾತಿ ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಡಯಟ್ಗಳ ಮೂಲಕ ಸಂಗ್ರಹಿಸುವುದು.
  2. ಅನುದಾನಿತ ಶಿಕ್ಷಕ ಶಿಕ್ಷಣ ಸಂಸ್ಥೆಗಳ ವೇತನಾನುದಾನ ಹಂಚಿಕೆಯಲ್ಲಿ ಡಯಟ್ಗಳು ನಿಯಮಾನುಸಾರ ಕಾರ್ಯನಿರ್ವಹಿಸುವಂತೆ ಮೇಲುಸ್ತುವಾರಿ ವಹಿಸುವುದು.

ತರಬೇತಿ /ಪುನ:ಶ್ಚೇತನ

PSTE ವಿಭಾಗವು ಡಿ.ಪಿ.ಎಸ್.ಇ, ಡಿ.ಎಲ್.ಇಡಿ, ಮತು ಡಿ.ಪಿ.ಇಡಿ ಪಠ್ಯಕ್ರಮಗಳ ಮರುಪರಿಶೀಲನೆ ಅಥವಾ ಪರಿಷ್ಕರಣೆ ಮಾಡಿದ ಸಂಧರ್ಭಗಳಲ್ಲಿ ಹಾಗೂ ನವೀನತೆಯುಳ್ಳ ರೂಢಿಗಳನ್ನು ಪರಿಚಯಿಸಲು ಶಿಕ್ಷಕ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಿಗೂ, ಉಪನ್ಯಾಸಕರಿಗೂ ಅವಶ್ಯವಾದ ಪುನ:ಶ್ಚೇತನ ಕಾರ್ಯಗಾರಗಳನ್ನು ಯೋಜಿಸಿ ನಿರ್ವಹಿಸುತ್ತದೆ.

ಶಾಖೆಯ ಹೆಸರು :ಶಿಕ್ಷಕರ ಶಿಕ್ಷಣ

ಪೀಠಿಕೆ :

ಸಮಗ್ರ ಶಿಕ್ಷಣ ಯೋಜನೆಯಡಿ ಶಿಕ್ಷಕ ಶಿಕ್ಷಣವನ್ನು ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರದಿಂದ ಅನುದಾನವನ್ನು ಪಡೆದುಕೊಳ್ಳುತ್ತಿದೆ. ಶಿಕ್ಷಕ ಶಿಕ್ಷಣವು ಸೇವಾ ಪೂರ್ವ ಶಿಕ್ಷಕ ಶಿಕ್ಷಣ ಮತ್ತು ಸೇವಾ ನಿರತ ಶಿಕ್ಷಕ ಶಿಕ್ಷಣ (ತರಬೇತಿ) ವನ್ನು ಒಳಗೊಂಡಿರುತ್ತದೆ.

ಪ್ರತಿ ವರ್ಷವು DSERT ಯಲ್ಲಿನ ಶಿಕ್ಷಕ ಶಿಕ್ಷಣ ಕೋಶವು ಎಲ್ಲಾ ಡಯಟ್ ಗಳೊಂದಿಗೆ ಸಮನ್ವಯ ಸಾಧಿಸಿ ಆಯಾ ಡಯಟ್ ನ ವಾರ್ಷಿಕ ಕ್ರಿಯಾಯೋಜನೆ & ಆಯವ್ಯಯವನ್ನು ಸಿದ್ದಪಡಿಸಲು ನೆರವಾಗುತ್ತಿದೆ. ಎಲ್ಲ ಡಯಟ್ ಗಳ ವಾರ್ಷಿಕ ಕ್ರಿಯಾಯೋಜನೆ & ಆಯವ್ಯಯಗಳನ್ನು ಕ್ರೋಢೀಕರಿಸಿ DSERT ಯ ವಾರ್ಷಿಕ ಕ್ರಿಯಾಯೋಜನೆ & ಆಯವ್ಯಯ ಯೋಜನೆಯನ್ನು ಕೇಂದ್ರ ಶಿಕ್ಷಣ ಮಂತ್ರಾಲಯಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗುತ್ತದೆ.

ಧ್ಯೇಯೋದ್ದೇಶಗಳು :
  1. ಡಯಟ್ ಮತ್ತು ಸಿ.ಟಿ.ಇ ಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಹಂಚಿಕೆ ಮಾಡುವುದು.
  2. ಡಯಟ್ ಮತ್ತು ಸಿ.ಟಿ.ಇ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ನಿಯಮಾನುಸಾರ ದೊರೆಯಬೇಕಾದ ಸೇವಾ ಸವಲತ್ತುಗಳನ್ನು ಸಕಾಲದಲ್ಲಿ ಮಂಜೂರು ಮಾಡಲು ಕ್ರಮವಹಿಸುವುದು.
  3. ಸಿ.ಟಿ.ಇ ಪ್ರಾಂಶುಪಾಲರುಗಳ ತಾತ್ಕಾಲಿಕ ಪ್ರವಾಸ ಸೂಚಿ ಹಾಗೂ ಪ್ರವಾಸ ದಿನಚರಿಗಳನ್ನು ಅನುಮೋದಿಸುವುದು.
  4. ಬೆಂಗಳೂರು ವಿಭಾಗದ ಡಯಟ್ ಪ್ರಾಂಶುಪಾಲರುಗಳ ತಾತ್ಕಾಲಿಕ ಪ್ರವಾಸ ಸೂಚಿ ಹಾಗೂ ಪ್ರವಾಸ ದಿನಚರಿಗಳನ್ನು ಅನುಮೋದಿಸುವುದು.
  5. ಡಯಟ್ ಮತ್ತು ಸಿ.ಟಿ.ಇ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ವೈದ್ಯಕೀಯ ವೆಚ್ಚ ಮರುಪಾವತಿ ಕುರಿತು ಸಕಾಲದಲ್ಲಿ ಕ್ರಮವಹಿಸುವುದು.
  6. ಸಿ.ಟಿ.ಇ ಮತ್ತು ಡಯಟ್ ಗಳೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸುವುದು .

ಪ್ರಮುಖ ಚಟುವಟಿಕೆಗಳು :
  1. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಅಗತ್ಯತೆಗೆ ಪೂರಕವಾಗಿ ಸಂಶೋಧನೆಗಳನ್ನು ಡಿ.ಎಸ್.ಇ.ಆರ್.ಟಿ ಮತ್ತು ಡಯಟ್ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳುವುದು.
  2. ಡಯಟ್ ಗಳಲ್ಲಿ ಸ್ಥಾಪಿಸಲಾಗಿರುವ ಗಣಕ ಯಂತ್ರ ಪ್ರಯೋಗಾಲಯಗಳನ್ನು ಬಳಸಿಕೊಂಡು, ಸೇವಾ ನಿರತ ಶಿಕ್ಷಕರಿಗೆ ತರಬೇತಿ ಹಾಗೂ ಇತರೆ ಮೌಲ್ಯಮಾಪನ ಕಾರ್ಯಗಳನ್ನು ಹಮ್ಮಿಕೊಳ್ಳುವುದು. ಗಣಕಯಂತ್ರ ಪ್ರಯೋಗಾಲಯಗಳ ನಿರ್ವಹಣೆ ಮಾಡುವುದು.
  3. ಪ್ರತೀ ಮಾಹೆ ಪ್ರಾಂಶುಪಾಲರುಗಳ ಸಭೆಯನ್ನು ಆಯೋಜಿಸಿ, ಸರ್ಕಾರ ಹಾಗೂ ಇಲಾಖೆಯ ಕಾರ್ಯಕ್ರಮಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡುವುದು.

ಶಾಖೆಯ ಹೆಸರು: ಎನ್.ಇ.ಪಿ ವಿಭಾಗ

ಪೀಠಿಕೆ:

ಪ್ರಸ್ತುತ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅಗತ್ಯವಾಗಿರುವ, ಸಾಮರ್ಥ್ಯಕ್ಕೆ ಅನುಗುಣವಾಗಿರುವಂತಹ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವ ಮತ್ತು ಸಮಾನ ಮತ್ತು ನ್ಯಾಯಯುತ ಸಮಾಜವನ್ನು ರೂಪಿಸುವ, ಒಂದು ಶಿಕ್ಷಣ ವ್ಯವಸ್ಥೆಯನ್ನು ರಚಿಸುವ ದೃಷ್ಟಿಕೋನದೊಂದಿಗೆ 2020 ರ ಜುಲೈ 29 ರಂದು ರಾಷ್ಟ್ರೀಯ ಶಿಕ್ಷಣ ನೀತಿ -2020 ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. 34 ವರ್ಷಗಳ ನಂತರ ಜಾರಿಗೆ ಬರುತ್ತಿರುವ ಈ ನೂತನ ಶಿಕ್ಷಣ ನೀತಿಯು 21 ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ. ಇದು ದೇಶದ ಶೈಕ್ಷಣಿಕ ಸಂರಚನೆಯನ್ನು ಪುನರ್ ರಚಿಸುವ, ಭಾರತೀಯ ಜ್ಞಾನ ಪರಂಪರೆಯನ್ನು ಆಧರಿಸಿದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ, ಭಾರತದ ಸಾಂಸ್ಕೃತಿಕ, ಪಾರಂಪರಿಕ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (ಕನ್ನಡ): National Education Policy (Kannada)

ರಾಷ್ಟ್ರೀಯ ಶಿಕ್ಷಣ ನೀತಿ (ಇಂಗ್ಲೀಷ್): National Education Policy (English)

ಉದ್ಧೇಶಗಳು:
  1. ರಾಷ್ಟ್ರೀಯ ಶಿಕ್ಷಣ ನೀತಿ -2020ರ ಶಿಫಾರಸ್ಸಿಗೆ ಅನುಗುಣವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸುವುದು.
  2. ರಾಷ್ಟ್ರೀಯ ಶಿಕ್ಷಣ ನೀತಿ -2020ರ ಶಿಫಾರಸ್ಸಿಗೆ ಅನುಗುಣವಾಗಿ ರಾಜ್ಯ ಪಠ್ಯಕ್ರಮ ಮತ್ತು ರಾಜ್ಯ ಪಠ್ಯವಸ್ತು ರಚನೆ.
ಪ್ರಮುಖ ಚಟುವಟಿಕೆಗಳು
  1. ಪಠ್ಯಕ್ರಮ ರಚನೆ
  2. ಪಠ್ಯವಸ್ತು ರಚನೆ
1. ಪಠ್ಯಕ್ರಮ ರಚನೆ:

ರಾಷ್ಟ್ರೀಯ ಶಿಕ್ಷಣ ನೀತಿಯು ಶಾಲಾ ಶಿಕ್ಷಣದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಇರುವ 10 + 2 ರಚನೆಯನ್ನು 3-18 ವಯಸ್ಸಿನವರನ್ನು ಒಳಗೊಂಡ, ಹೊಸ ಬೋಧನಾ ವಿಧಾನ ಮತ್ತು ಪಠ್ಯಕ್ರಮದ ಪುನರ್ ರಚನೆಯೊಂದಿಗೆ 5+3+3+4 ರ ರಚನೆಯಾಗಿ ಮಾರ್ಪಡಿಸುವ ಶಿಫಾರಸ್ಸನ್ನು ಒಳಗೊಂಡಿದ್ದು ಕ್ರಮವಾಗಿ 3-8, 8-11, 11-14 ಮತ್ತು 14-18 ವರ್ಷದ ವಯೋಮಾನಕ್ಕೆ ಅನುಗುಣವಾಗಿ ರಚಿಸಲಾಗಿದೆ.

ಪೂರ್ವ ಬಾಲ್ಯಾವಸ್ಥೆ ಆರೈಕೆ ಮತ್ತು ಶಿಕ್ಷಣದ ಹಂತವು 3 ವರ್ಷಗಳ ಶಾಲಾ ಪೂರ್ವ ಹಂತ ಅಂಗನವಾಡಿ ಮತ್ತು 2 ವರ್ಷಗಳ ಪ್ರಾಥಮಿಕ ಶಾಲೆ (1-2ನೇ ತರಗತಿ) ಎರಡನ್ನೂ ಒಳಗೊಂಡ, 3-8 ವಯೋಮಾನದ ಮಕ್ಕಳನ್ನು, ಪೂರ್ವ ಸಿದ್ದತಾ ಹಂತವು 3-5ನೇ ತರಗತಿಯ 8-11 ವಯೋಮಾನದ ಮಕ್ಕಳನ್ನು, ಮಧ್ಯಮ ಹಂತ (6-8ನೇ ತರಗತಿ) 11-14 ವಯೋಮಾನದ ಮಕ್ಕಳನ್ನು ಮತ್ತು ಪ್ರೌಢ ಹಂತವು 14-18 ವಯೋಮಾನದ ಮಕ್ಕಳನ್ನು ಒಳಗೊಳ್ಳುತ್ತದೆ.

ಪೂರ್ವ ಬಾಲ್ಯಾವಸ್ಥೆ ಆರೈಕೆ ಮತ್ತು ಶಿಕ್ಷಣದ ಹಂತವು (5 ವರ್ಷಗಳು) ಆಟ/ಚಟುವಟಿಕೆ ಆಧಾರಿತ ಹಾಗೂ ಶೋಧನಾ ಆಧಾರಿತ ಕಲಿಕೆಗೆ ಒತ್ತು ನೀಡುತ್ತದೆ. ಇದು ಉತ್ತಮ ನಡವಳಿಕೆ, ಸೌಜನ್ಯ, ನೀತಿ, ವೈಯಕ್ತಿಕ ಮತ್ತು ಸಾಮಾಜಿಕ ನೈರ್ಮಲ್ಯ, ಸ್ವಚ್ಛತೆ, ತಂಡದ ಕೆಲಸ, ಸಹಕಾರ ಇತ್ಯಾದಿ ಮೌಲ್ಯಗಳನ್ನು ಕೇಂದ್ರೀಕರಿಸುತ್ತದೆ.

ಪೂರ್ವ ಸಿದ್ದತಾ ಹಂತವು ಪ್ರಾಯೋಗಿಕ ಕಲಿಕೆಯನ್ನು ಕೇಂದ್ರೀಕರಿಸುತ್ತದೆ. ಇದು ಹೊಸ ಪಠ್ಯಪುಸ್ತಕದ ಪರಿಚಯದೊಂದಿಗೆ ಚಟುವಟಿಕೆ ಆಧಾರಿತ ಕಲಿಕೆಯಿಂದ ಔಪಚಾರಿಕ ಹಾಗೂ ಸಂವಹನಾತ್ಮಕ ಶಾಲಾ ತರಗತಿ ಕೋಣೆಯ ಕಲಿಕೆಯ ಕಡೆಗೆ ಕ್ರಮೇಣ ಪರಿವರ್ತನೆಯಾಗುತ್ತದೆ. ಇದು ಔಪಚಾರಿಕ ಕಲಿಕೆಗೆ ಭದ್ರ ಬುನಾದಿಯನ್ನು ಹಾಕುತ್ತದೆ. ಬುನಾದಿ ಹಂತದ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ವೃದ್ಧಿಯನ್ನು ಸಾಧಿಸುವುದು ಈ ಹಂತದ ಪ್ರಮುಖ ಗುರಿಯಾಗಿದೆ.

ಮಧ್ಯಮ ಹಂತದಲ್ಲಿ ಅಮೂರ್ತ ಪರಿಕಲ್ಪನೆಗಳನ್ನು ಚರ್ಚಾ ವಿಧಾನದಲ್ಲಿ ಅರ್ಥೈಸಿಕೊಳ್ಳಲು ಪ್ರತಿ ಹಂತದಲ್ಲೂ ವಿಷಯ ಶಿಕ್ಷಕರನ್ನು ಪರಿಚಯಿಸಲಾಗುತ್ತದೆ. ವಿಷಯ ಶಿಕ್ಷಕರ ಮೂಲಕ ವಿದ್ಯಾರ್ಥಿಗಳು ವಿಜ್ಞಾನ, ಗಣಿತ, ಕಲೆ, ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳನ್ನು ಕಲಿಯಲು ಸಿದ್ದರಾಗುತ್ತಾರೆ. ಈ ಹಂತದಲ್ಲಿ ಅನುಭವಾತ್ಮಕ ಕಲಿಕೆ ಹಾಗೂ ವಿವಿಧ ವಿಷಯಗಳ ನಡುವಿನ ಸಹ ಸಂಬಂಧ ಮತ್ತು ಪರಿಶೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಪ್ರೌಢ ಹಂತವು 4 ವರ್ಷಗಳ ವಿಷಯಾಧಾರಿತ ಶಿಕ್ಷಣವನ್ನು ಒಳಗೊಂಡಿದೆ. ಈ ಪಠ್ಯಕ್ರಮ ಶೈಲಿಯು ಬಹುಶಾಸ್ತ್ರೀಯ ಕಲಿಕೆಯನ್ನು ಆಧರಿಸಿದೆ. ಇದು ವಿದ್ಯಾರ್ಥಿಗಳಿಗೆ ವಿಷಯ ಆಯ್ಕೆಯ ಅವಕಾಶವನ್ನು ನೀಡುತ್ತದೆ. ಇದರೊಂದಿಗೆ ವಿಷಯಗಳು ಹೆಚ್ಚಿನ ಆಳ ಮತ್ತು ತಾರ್ಕಿಕ ಚಿಂತನೆ, ಜೀವನ ಆಕಾಂಕ್ಷೆಗೆ ಹೆಚ್ಚಿನ ಗಮನವನ್ನು ನೀಡುತ್ತದೆ. ವಿಷಯ ಸಂಪದೀಕರಣಕ್ಕೆ ಒತ್ತು ಕೊಡುತ್ತಾ ತನ್ನನ್ನು ತಾನು ವಿಷಯಾಧಾರಿತ ಕಲಿಕೆಗೆ ಒಡ್ಡಿಕೊಳ್ಳುವುದು ಈ ಹಂತದ ಪ್ರಮುಖ ಗುರಿ. ಇದು ಹೆಚ್ಚಿನ ನಮ್ಯತೆ ಮತ್ತು ಘಟಕಗಳನ್ನು ಆಗಾಗ್ಗೆ ಮೌಲ್ಯಮಾಪನ ಮಾಡಿಕೊಳ್ಳಲು ವಿದ್ಯಾರ್ಥಿಗಳನ್ನು ಶಕ್ತಗೊಳಿಸುತ್ತದೆ.

ಮೇಲೆ ವಿವರಿಸಲಾದ ಪ್ರತಿ ಹಂತದ ಬದಲಾವಣೆಗಳನ್ನು ಕಾರ್ಯಗತಗೊಳಿಸಲು ರಾಷ್ಟ್ರ ಮಟ್ಟದಲ್ಲಿ ರಚನೆಗೊಂಡ ಎನ್.ಇ.ಪಿ 2020 ರ ಆಕಾಂಕ್ಷೆಗಳಿಗೆ ಅನುಸಾರವಾಗಿ ಕರ್ನಾಟಕವು ಅಗತ್ಯತೆಗೆ ಅನುಗುಣವಾಗಿ ಸದೃಢವಾದ, ತನ್ನದೇ ಆದ ಪಠ್ಯಕ್ರಮದ ಚೌಕಟ್ಟನ್ನು ರೂಪಿಸಬೇಕಾಗಿದೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸ್ಸಿಗೆ ಅನುಗುಣವಾಗಿ ಹೊಸ 5+3+3+4 ವಿನ್ಯಾಸದ ಶಾಲಾ ಪಠ್ಯಕ್ರಮ ಸಿದ್ಧಪಡಿಸಲು ಎನ್.ಸಿ.ಆರ್.ಟಿ.ಯ ನಿರ್ದೇಶನದಂತೆ ಕೆಳಕಂಡ ನಾಲ್ಕು ಕ್ಷೇತ್ರಗಳಲ್ಲಿ ರಾಜ್ಯ ಪಠ್ಯಕ್ರಮ ರಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ

  1. ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ
  2. ಶಾಲಾ ಶಿಕ್ಷಣ
  3. ಶಿಕ್ಷಕರ ಶಿಕ್ಷಣ ಮತ್ತು
  4. ವಯಸ್ಕರ ಶಿಕ್ಷಣ

ಸರ್ಕಾರಿ ಆದೇಶ ಸಂಖ್ಯೆ ಇಪಿ 69 ಯೋಯೋಕ 2022 ದಿನಾಂಕ: 07.04.2022 ರಂತೆ ಶಾಲಾ ಶಿಕ್ಷಣ (ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಒಳಗೊಂಡಂತೆ), ಶಿಕ್ಷಕರ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಕ್ಷೇತ್ರಗಳಿಗೆ ರಾಜ್ಯ ಪಠ್ಯಕ್ರಮ ಚೌಕಟ್ಟು ರಚಿಸಲು ಪ್ರತ್ಯೇಕವಾದ ಚಾಲನಾ ಸಮಿತಿಗಳನ್ನು ರಚಿಸಲಾಗಿದೆ. ಇಪಿ70 ಯೋಯೋಕ 2022 ದಿನಾಂಕ:06.04.2022 ರಂತೆ ಪೂರ್ವ ಪ್ರಾಥಮಿಕ ಶಿಕ್ಷಣದ ಪಠ್ಯಕ್ರಮ ಚೌಕಟ್ಟು ರಚನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಸಮಿತಿಯನ್ನು ರಚಿಸಲಾಗಿದೆ.

2. ಪೊಸಿಷನ್ ಪೇಪರ್ ಸಿದ್ದತೆ:

ರಾಜ್ಯ ಪಠ್ಯಕ್ರಮ ರಚನಾ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ), ಶಾಲಾ ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣ ವಿಷಯಗಳನ್ನು ಒಳಗೊಂಡಂತೆ 26 ಪೊಸಿಷನ್ ಪೇಪರ್ ಗಳನ್ನು ಸಿದ್ಧಪಡಿಸಲಾಗಿದೆ. ಪೊಸಿಷನ್ ಪೇಪರ್ ಸಿದ್ದತೆಗೆ ವಿವಿಧ ಸ್ಥರಗಳ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿಷಯ ಪರಿಣಿತರನ್ನು ಒಳಗೊಂಡಂತಹ 9 ಸದಸ್ಯರನ್ನು ಒಳಗೊಂಡ ರಾಜ್ಯ ಮಟ್ಟದ 26 ಸಮಿತಿಯನ್ನು ರಚಿಸಲಾಗಿದೆ. ಪ್ರತಿ ಸಮಿತಿಯು ಒಬ್ಬರು ಮುಖ್ಯಸ್ಥರು, ಏಳು ಸದಸ್ಯರು, ಹಾಗೂ ಒಬ್ಬರು ಇಲಾಖೆಯ ಸಮನ್ವಯಾಧಿಕಾರಿಗಳನ್ನು ಒಳಗೊಂಡಿದೆ. ಪ್ರಸ್ತುತ 26 ವಿಷಯಗಳ ಪೊಸಿಷನ್ ಪೇಪರ್ ಗಳ ಸಿದ್ಧತಾ ಕಾರ್ಯವು ಪೂರ್ಣಗೊಂಡಿರುತ್ತದೆ. ಪೊಸಿಷನ್ ಪೇಪರ್ ಗಳನ್ನು ಎನ್.ಸಿ.ಇ.ಆರ್.ಟಿ. ಅಭಿವೃದ್ಧಿಪಡಿಸಿರುವ ತಾಂತ್ರಿಕ ವೇದಿಕೆಯಲ್ಲಿ ಅಪ್ ಲೋಡ್ ಮಾಡಲಾಗಿದೆ.

ಪೊಸಿಷನ್ ಪೇಪರ್ ಲಿಂಕ್ : 26 Position papers

ಪೊಸಿಷನ್ ಪೇಪರ್ ಸಿದ್ದತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಮಾನ್ಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡು ಸನ್ಮಾನಿಸಲಾಯಿತು.

ವೀಡಿಯೋ ಲಿಂಕ್

3. ಜಾಗೃತಿ ಕಾರ್ಯಕ್ರಮಗಳು:

• ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಉಸ್ತುವಾರಿ ಅಧಿಕಾರಿಗಳಾದ ಇಲಾಖೆಯ ನಿರ್ದೇಶಕರು, ಸಹನಿರ್ದೇಶಕರು, ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ರಾಜ್ಯ ಹಂತದಲ್ಲಿ ಒಂದು ದಿನದ ಸಮ್ಮೇಳನವನ್ನು ನಡೆಸಲಾಗಿದೆ.

ಯೂ-ಟ್ಯೂಬ್ ವಿಡೀಯೋ ಲಿಂಕ್ : https://youtu.be/kwRRAiG26_I

• ಕ್ಷೇತ್ರಮಟ್ಟದಲ್ಲಿ ಎಲ್ಲಾ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಾಜ್ಯಹಂತದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ, ಬಿ.ಆರ್.ಸಿ, ಸಿ.ಆರ್.ಪಿಗಳಿಗೆ ಒಂದು ದಿನದ ಟೆಲಿಕಾನ್ಫ್ರೆನ್ಸ್ ಅನ್ನು ನಡೆಸಲಾಗಿದೆ. ತರಬೇತಿ ಪಡೆದ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು, ಬಿ.ಆರ್.ಸಿ, ಸಿ.ಆರ್.ಪಿಗಳು ತಮ್ಮ ವ್ಯಾಪ್ತಿಯ ಶಾಲಾ ಶಿಕ್ಷಕರಿಗೆ ವೆಬಿನಾರ್ ಮೂಲಕ ತರಬೇತಿಯನ್ನು ನೀಡಿರುತ್ತಾರೆ.

ದೈಹಿಕ ಮತ್ತು ಆರೋಗ್ಯ ಶಿಕ್ಷಣ

ಪೀಠಿಕೆ:

ಶಿಕ್ಷಣ ಎಂದರೆ ಮನುಷ್ಯನ ಸರ್ವತೋಮುಖ ಬೆಳವಣಿಗೆ. “ಆರೋಗ್ಯವಾದ ಮನಸ್ಸು ಆರೋಗ್ಯವಾದ ದೇಹದೊಳಗೆ” ಎನ್ನುವ ನಾಣ್ನುಡಿಯಂತೆ ಮಗುವಿನ ಸರ್ವಾಂಗೀಣ ಬೆಳವಣಿಗೆ ಮಾಡುವುದೇ ಶಿಕ್ಷಣದ ಗುರಿ. ಶಾರೀರಿಕ, ಬೌದ್ಧಿಕ, ಸಾಮಾಜಿಕ, ನೈತಿಕ ವಿಕಾಸವನ್ನುಂಟು ಮಾಡುವಲ್ಲಿ ದೈಹಿಕ ಹಾಗೂ ಆರೋಗ್ಯ ಶಿಕ್ಷಣ ಮಹತ್ವದ ಪಾತ್ತವನ್ನು ವಹಿಸುತ್ತದೆ. ಆದ್ದರಿಂದಲೇ ದೈಹಿಕ ಶಿಕ್ಷಣ ಕ್ಷೇತ್ರವನ್ನು ಶಿಕ್ಷಣದ ಅವಿಭಾಜ್ಯ ಅಂಗ ಎಂಬುದಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ.


ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005 ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಗುಣಾತ್ಮಕ ಶಿಕ್ಷಣದೊಂದಿಗೆ ಮಗುವಿನ ಸಮಗ್ರ ಬೆಳವಣಿಗೆಗೆ ಪ್ರಾಧಾನ್ಯತೆ ನೀಡುವಂತೆ ಅಭಿಪ್ರಾಯ ಪಟ್ಟಿದೆ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣವು ಚಟುವಟಿಕೆ ಆಧಾರಿತ ಶಿಕ್ಷಣವಾಗಿರುವುದರಿಂದ ಮಗುವಿನ ಹಾಗೂ ಶಿಕ್ಷಕರ ಕಲಿಕೆಗೆ ಪೂರಕವಾಗಿದೆ. ಮಕ್ಕಳ ವಯಸ್ಸಿಗನುಗುಣವಾದ ಶಿಕ್ಷಣವು ಎಷ್ಟು ಅವಶ್ಯಕವೋ ಅವರ ಸಾಮರ್ಥ್ಯಕ್ಕೆ ಅನುಗುಣವಾದ ದೈಹಿಕ ಶಿಕ್ಷಣವು ಅಷ್ಟೇ ಅವಶ್ಯಕ.


ದೈಹಿಕ ಶಿಕ್ಷಣವು ಎಲ್ಲಾವಿಷಯಗಳಲ್ಲಿ ಮೇಳೈಸಿದೆ, ಆಟೋಟಗಳಲ್ಲಿ, ಮಕ್ಕಳು ಶಾಲೆಗೆ ಬರುವಾಗ, ಶಾಲೆಯಿಂದ ಹೋಗುವಾಗ,ಶಿಕ್ಷಕರು ತರಗತಿಯಲ್ಲಿ ಇರುವಾಗ, ಶಿಕ್ಷಕರು ತರಗತಿಯಲ್ಲಿ ಇಲ್ಲದಿರುವಾಗ, ತರಗತಿಯ ಒಳಗೆ-ಹೊರಗೆ ವಿದ್ಯಾರ್ಥಿಗಳು ಒಂದಲ್ಲಾಒಂದು ಚಲನೆಗಳನ್ನು ಮಾಡುತ್ತಿರುತ್ತಾರೆ. ಆದ್ದರಿಂದ ದೈಹಿಕ ಶಿಕ್ಷಣವು ಪ್ರತ್ಯೇಕ ಪಠ್ಯವಿಷಯವಲ್ಲ ಅದು ಎಲ್ಲಾ ವಿಷಯಗಳಲ್ಲಿ ಸಮ್ಮಿಳಿತಗೊಂಡ ವಿಷಯವಾಗಿದೆ.


ಧ್ಯೇಯೋದ್ದೇಶಗಳು:
  • ದೈಹಿಕ ಶಿಕ್ಷಣದ ಮೂಲ ಪರಿಕಲ್ಪನೆಯನ್ನು ಸಾಕಾರಗೊಳಿಸಲು ನವೀನ ರಿತಿಯ ಚಟುವಟಿಕೆಗಳನ್ನು ರೂಪಿಸುವ ಸಾಮರ್ಥ್ಯ ಅಭಿವೃದ್ದಿಪಡಿಸುವುದು.
  • ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು-2005 ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಹಿನ್ನೆಲೆಯಲ್ಲಿ ಬದಲಾಗುತ್ತಿರುವ ರಾಷ್ಟ್ರ ಹಾಗೂ ರಾಜ್ಯ ಶಿಕ್ಷಣ ನೀತಿ, ಕ್ರಮ ಮತ್ತು ಸನ್ನಿವೇಶಗಳ ಕುರಿತು ದೈಹಿಕ ಶಿಕ್ಷಣ ಶಿಕ್ಷಕರಿಗೆ ಅವಶ್ಯ ತರಬೇತಿಗಳನ್ನು ವಿನ್ಯಾಸ ಮಾಡುವುದು ಹಾಗೂ ಆಯೋಜಿಸುವುದು.

ಶಾಖೆಯ ಪ್ರಮುಖ ಚಟುವಟಿಕೆಗಳು:
  • ಮಾಡ್ಯೂಲ್ ರಚನೆ.
  • ರಾಜ್ಯದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ತರಬೇತಿ ಆಯೋಜಿಸುವುದು.
  • ಜಿಲ್ಲಾ ಮತ್ತು ಬ್ಲಾಕ್ ಹಂತದಲ್ಲಿನ ದೈಹಿಕ ಶಿಕ್ಷಣ ವಿಭಾಗಕ್ಕೆ ಮಾರ್ಗದರ್ಶನ ನೀಡುವುದು.
  • ದೈಹಿಕ ಶಿಕ್ಷಣ ಶಿಕ್ಷಕರಿಗೆ ಸಂಬಂಧಿಸಿದಂತೆ ಗುರುತಿಸಲಾಗುವ ಕ್ಷೇತ್ರಗಳಲ್ಲಿ ಅವಶ್ಯ ಮೌಲ್ಯಮಾಪನ, ಸಮೀಕ್ಷೆ , ಸಂಶೋಧನೆಗಳನ್ನು ಕೈಗೊಳ್ಳಲು ಅಗತ್ಯ ಮಾರ್ಗದರ್ಶನ ಹಾಗೂ ಅನುಪಾಲನೆ.

ಶಾಖೆಯ ಪ್ರಮುಖ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು:
  • ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ದೈಹಿಕ ಶಿಕ್ಷಣ , ಯೋಗ , ಮೌಲ್ಯ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ ತರಬೇತಿ.
  • ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ದೈಹಿಕ ಶಿಕ್ಷಣ , ಯೋಗ , ಮೌಲ್ಯ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ ತರಬೇತಿ.
  • ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮತ್ತು ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಬ್ಯಾಂಡ್ಸೆಟ್ , ಏರೋಬಿಕ್ ,ತಾಳಬದ್ದ ಚಟುವಟಿಕೆಗಳ ತರಬೇತಿ .
  • ಜೀವನ ವಿಜ್ಞಾನ ಕಾರ್ಯಕ್ರಮ.

ಶಾಖೆಯ ಪ್ರಮುಖ ಕಾರ್ಯಕ್ರಮಗಳ ಪ್ರಗತಿ:

ಜೀವನ ವಿಜ್ಞಾನ ತರಬೇತಿ: ಡಿ.ಎಸ್.ಇ.ಆರ್.ಟಿಯು ಕರ್ನಾಟಕ ಜೀವನ ವಿಜ್ಞಾನ ಅಕಾಡೆಮಿ, ಬೆಂಗಳೂರು ಮತ್ತು ಅಣುವ್ರತ ಸಮಿತಿ, ಬೆಂಗಳೂರು ಇವರ ಸಹಯೋಗದೊಂದಿಗೆ “ಜೀವನ ವಿಜ್ಞಾನ ತರಬೇತಿ “ ಕಾರ್ಯಕ್ರಮ ಪ್ರಗತಿಯಲ್ಲಿದೆ. ( ಥೀಮ್ಗಳು:- ಸಹಕಾರ –ಸಹಬಾಳ್ವೆ , ವ್ಯಸನ ಮುಕ್ತ ಜೀವನ , ದೇಶಪ್ರೇಮ , ನಿತ್ಯ ಜೀವನದಲ್ಲಿ ಯೋಗ , ಪರಿಸರ ಪ್ರಜ್ಞೆ ,ಆತ್ಮ ನಿರ್ಭರತೆ , ಕೌಟುಂಬಿಕ ಮೌಲ್ಯಗಳು , ರಸ್ತೆ ಸುರಕ್ಷತೆ ಮತ್ತು ಪ್ರಥಮ ಚಿಕಿತ್ಸೆ , ಸಂವಹನ , ಹಣಕಾಸು ಸಾಕ್ಷರತೆ, ಶಿಸ್ತು ಮತ್ತು ಸಮಯ ಪಾಲನೆ , ಮಾನಸಿಕ ಒತ್ತಡ , ವ್ಯಾವಹಾರಿಕ ಜ್ಞಾನ , ಸೃಜನ ಶೀಲತೆ , ಸೈಬರ್ ಸೇಪ್ಟಿ , ಆರೋಗ್ಯಕರ ಜೀವನ ಶೈಲಿ ಮತ್ತು ರಾಷ್ಟ್ರೀಯ ಭಾವೈಕ್ಯತೆ )


ಶಾಖೆಯಿಂದ ನಿರ್ವಹಿಸಲಾಗುತ್ತಿರುವ ತರಬೇತಿಗಳ ವಿವರ:

ಜೀವನ ವಿಜ್ಞಾನ ತರಬೇತಿ “ ಕಾರ್ಯಕ್ರಮ

ತರಬೇತಿಗಳ ಮೂರು ವರ್ಷಗಳ ಅಂಕಿ ಅಂಶ:
ಕ್ರ.ಸಂ ವರ್ಷ ವಿವರ
1 2019-20 ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ಯೋಗ ಮತ್ತು ದೈಹಿಕ ಶಿಕ್ಷಣ
2 2019-20 ಜೀವನ ಕೌಶಲ್ಯಗಳು –ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗಾಗಿ
3 2019-20 ದೈಹಿಕ ಶಿಕ್ಷಣ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ( ಶಿಕ್ಷಕರ ವೃತ್ತಿಪರ ಅಭಿವೃದ್ಧಿ )
4 2019-20 ಯೋಗ ,ಆರೋಗ್ಯ ಮತ್ತು ಮೌಲ್ಯ ಶಿಕ್ಷಣ ( ಶಿಕ್ಷಕರ ವೃತ್ತಿಪರ ಅಭಿವೃದ್ಧಿ )
5 2020-21 ಕೋವಿಡ್-19 ರ ಕಾರಣದಿಂದ ತರಬೇತಿ ನಡೆದಿರುವುದಿಲ್ಲ.
6 2021-22 ಕೋವಿಡ್-19 ರ ಕಾರಣದಿಂದ ತರಬೇತಿ ನಡೆದಿರುವುದಿಲ್ಲ.

ಡಯಟ್ಗಳೊಂದಿಗೆ ನಿಮ್ಮ ಶಾಖೆಯ ಕಾರ್ಯನಿರ್ವಹಣೆಯ ವಿವರ:
  • ಡಯಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಉಪನ್ಯಾಸಕರು/ಹಿರಿಯ ಉಪನ್ಯಾಸಕರು ಶಾಲಾ ಭೇಟಿ ಸಂದರ್ಭದಲ್ಲಿ ದೈಹಿಕ ಶಿಕ್ಷಣ ವಿಷಯದಲ್ಲಿ ಪರಿಶೀಲಿಸಬೇಕಾದ ಅಂಶಗಳ ಬಗ್ಗೆ ಮಾರ್ಗದರ್ಶನ.
  • ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ತರಬೇತಿ ಆಯೋಜಿಸಲು ಅಗತ್ಯ ಬೆಂಬಲ ಒದಗಿಸುವುದು.

ಜೀವನ ವಿಜ್ಞಾನ ತರಬೇತಿ ಕಾರ್ಯಾಗಾರ:-

1.ಜೀವನ ವಿಜ್ಞಾನ ತರಬೇತಿ 1 ಮತ್ತು 2 ನೇ ಕಾರ್ಯಾಗಾರದ ಕೈಪಿಡಿಯ ರಚನಾ ಕಾರ್ಯದ ಉದ್ಘಾಟನೆಯ ನ್ನು ದಿನಾಂಕ:05-08-2021 ರಂದು ಮಾನ್ಯ ಶ್ರೀ ಎಂ. ಆರ್. ಮಾರುತಿ ನಿರ್ದೇಶಕರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿರುತ್ತಾರೆ.



2. ಜೀವನ ವಿಜ್ಞಾನ ಸಂಪನ್ಮೂಲ ಸೃಜನಾ 4 ನೇ ಕಾರ್ಯಾಗಾರದಲ್ಲಿ ಮಾನ್ಯ ನಿರ್ದೇಶಕರಾದ ಶ್ರೀಮತಿ ಸುಮಂಗಲ ವಿ. ರವರು ಸಂಪನ್ಮೂಲ ವಿಡಿಯೋ ವೀಕ್ಷಿಸಿ, ಶಿಕ್ಷಕರು ಹಾಗೂ ಶಿಬಿರದ ಆಯೋಜಕರಿಗೆ ಮಾರ್ಗದರ್ಶನ ನೀಡಿದರು.



3. ರಾಜಾಸ್ಥಾನದ ಚುರು ಜಿಲ್ಲೆಯ ಸರ್ದಾರ್ ಶಹರ್ ನಲ್ಲಿ ಜೀವನ ವಿಜ್ಞಾನ ತರಬೇತಿಯ ಸಂಪನ್ಮೂಲ ಸೃಜನೆಯ ಕುರಿತು ಶ್ರೀ ಆಚಾರ್ಯ ಮಹಾ ಶ್ರಮಣ್ ಜೀ ರವರೊಂದಿಗೆ ಕರ್ನಾಟಕ ಸಂಪನ್ಮೂಲ ತಂಡ ಚರ್ಚಿಸಿದ ಸಂದರ್ಭದ ಚಿತ್ರ.



ಕಲಿಕಾಚೇತರಿಕಾಉಪಕ್ರಮ 2022-2023

ಕೋವಿಡ್ 19 ಸಾಂಕ್ರಾಮಿಕ ಜಾಗತಿಕವಾಗಿ ಹರಡಿರುವ ಹಿನ್ನೆಲೆಯಲ್ಲಿ 2019-2020 ಮತ್ತು 2020-2021 ನೇ ಸಾಲಿನಲ್ಲಿ ಸರಿಯಾಗಿ ಭೌತಿಕ ತರಗತಿಗಳು ನಡೆದಿರುವುದಿಲ್ಲ ಹಾಗೂ 2021-2022 ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ತಡವಾಗಿ ಪ್ರಾರಂಭಗೊಂಡಿವೆ. ಈ ವರೆಗೆ ಸೇತುಬಂಧ, ಪರ್ಯಾಯ ಶೈಕ್ಷಣಿಕ ಯೋಜನೆ, ವಿದ್ಯಾಗಮ, ಸಂವೇದಗಳಂತಹ ಕಾರ್ಯಕ್ರಮಗಳನ್ನು ಅಳವಡಿಸಲಾಗಿದ್ದರೂ ಸತತ 2 ಶೈಕ್ಷಣಿಕ ವರ್ಷಗಳಲ್ಲಿ ಮಕ್ಕಳು ಸರಿಯಾಗಿ ಶಾಲೆಗೆ ಹಾಜರಾಗದೇ ಇದ್ದುದರಿಂದ ಹಿಂದಿನ ಎರಡು ತರಗತಿಗಳ ಕಲಿಕಾಸಾಮರ್ಥ್ಯಗಳ ಕಲಿಕೆಯಲ್ಲೂ ಮಕ್ಕಳಲ್ಲಿ ಹಿನ್ನೆಡೆ ಉಂಟಾಗಿರುವುದು ಕಂಡು ಬಂದಿದೆ.


ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಕ್ಕಳು 18 ತಿಂಗಳುಗಳಿಂದ ಶಾಲೆಯಿಂದ ಹೊರಗುಳಿದಿದ್ದರಿಂದ ವಿಶೇಷವಾಗಿ ಪ್ರಾಥಮಿಕ ತರಗತಿಗಳಿಗೆ ಓದುವಿಕೆ ಮತ್ತು ಸಂಖ್ಯಾಶಾಸ್ತ್ರ ಎರಡರಲ್ಲೂ ಕಲಿಕೆಯ ಮಟ್ಟಗಳಲ್ಲಿ ಕುಸಿತ ಕಂಡು ಬಂದಿರುವುದನ್ನು ASER 2020 ಕರ್ನಾಟಕ ವರದಿಯು ಸ್ಪಷ್ಟಪಡಿಸಿದೆ. ಹಾಗೆಯೇ ಶಾಲೆಯ ಮುಚ್ಚುವಿಕೆಯಿಂದ ಓದುವುದು, ಸಂಕಲನ ಮತ್ತು ಗುಣಾಕಾರವನ್ನು ನಿರ್ವಹಿಸುವುದು ಇತ್ಯಾದಿ ಮೂಲಭೂತ ಸಾಮರ್ಥ್ಯಗಳನ್ನು ಮರೆತಿದ್ದಾರೆ. ಕೋವಿಡ್ನಿಂದ ಉಂಟಾಗಿರುವ ಕಲಿಕಾ ಹಿನ್ನೆಡೆಯನ್ನು ಹೊರತುಪಡಿಸಿ, ಪ್ರಸ್ತುತ ಪ್ರಾಥಮಿಕ ಶಾಲೆಯಲ್ಲಿನ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮೂಲಪಠ್ಯವನ್ನು ಓದುವ ಮತ್ತು ಗ್ರಹಿಸುವ ಸಾಮರ್ಥ್ಯ ಹಾಗೂ ಅಂಕಿಗಳೊಂದಿಗೆ ಮೂಲಕ್ರಿಯೆಗಳಾದ ಸಂಕಲನ ಮತ್ತು ವ್ಯವಕಲನವನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಪಡೆದಿರುವುದಿಲ್ಲ ಎಂದು ಎನ್.ಇ.ಪಿ 2020 ರಲ್ಲಿ ಉಲ್ಲೇಖಿಸಿದೆ. ಪ್ರಾಥಮಿಕ ಶಾಲೆಯಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯು ಬುನಾದಿ ಅಕ್ಷರಜ್ಞಾನ ಮತ್ತು ಸಂಖ್ಯಾಜ್ಞಾನವನ್ನು ಸಾಧಿಸುವುದು ಶಿಕ್ಷಣ ವ್ಯವಸ್ಥೆಯ ಪ್ರಥಮ ಆದ್ಯತೆಯಾಗಿರಬೇಕೆಂದು ಶಿಕ್ಷಣ ನೀತಿಯು ಪ್ರತಿಪಾದಿಸುತ್ತದೆ ಹಾಗೂ ಈ ಮೂಲಭೂತ ಕಲಿಕೆಯ ಅವಶ್ಯಕತೆಯನ್ನು ಮೊದಲು ಸಾಧಿಸಿದರೆ ಮಾತ್ರ ನೀತಿಯನ್ನು ಆಧರಿಸಿ ರಚಿಸುವ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣವನ್ನು ಒದಗಿಸುವ NCF / KCF 2022 ಹೊಸ ಪಠ್ಯಕ್ರಮವನ್ನು ಅಳವಡಿಸಲು ಬಲವಾದ ಅಡಿಪಾಯವನ್ನು ಒದಗಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಹಂತದ ಎಲ್ಲಾ ವಿದ್ಯಾರ್ಥಿಗಳಿಗೆ ಹೊಸ ಶಿಕ್ಷಣ ನೀತಿ 2020ಯಲ್ಲಿ ಹೆಚ್ಚಿನ ಆದ್ಯತೆ ನೀಡಿರುವ ಅಡಿಪಾಯದ ಕೌಶಲ್ಯಗಳನ್ನು ಕಲಿಸುವ ಅಗತ್ಯತೆಯು ಹಿಂದೆಂದಿಗಿಂತಲೂ ಈ ಸಮಯದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಆದ್ದರಿಂದ ಎಲ್ಲಾ ತರಗತಿಗಳಲ್ಲಿಯೂ (1 ರಿಂದ 9) ಪ್ರಸ್ತುತ ತರಗತಿಯ ನಿರ್ದಿಷ್ಟ ಕಲಿಕಾಫಲಗಳೊಂದಿಗೆ ಬುನಾದಿ ಅಕ್ಷರಜ್ಞಾನ ಮತ್ತು ಸಂಖ್ಯಾಜ್ಞಾನಕ್ಕೆ ಸಂಬಂಧಿಸಿದ ಕಲಿಕಾಫಲಗಳನ್ನು ಅಂತರ್ಗತಗೊಳಿಸುವ ಅವಶ್ಯಕತೆ ಕಂಡು ಬಂದಿದೆ.


ವಿಮರ್ಶಾತ್ಮಕ ಚಿಂತನೆ, ಆವಿಷ್ಕಾರ ಆಧಾರಿತ ಕಲಿಕೆಗೆ ಅವಕಾಶ ಕಲ್ಪಿಸಲು ಪ್ರತಿ ತರಗತಿಯಲ್ಲಿ ಪ್ರತಿ ವಿಷಯದಲ್ಲಿ ಪಠ್ಯಕ್ರಮದ ವಿಷಯವಸ್ತುವನ್ನು ಅದರಲ್ಲಿನ ಪ್ರಮುಖ ಅಂಶಗಳಿಗೆ (core competencies) ಸೀಮಿತಗೊಳಿಸಿ ಪಠ್ಯಕ್ರಮವನ್ನು ಕಡಿಮೆ ಮಾಡುವಂತೆ ಶಿಕ್ಷಣ ನೀತಿಯು ಶಿಫಾರಸ್ಸು ಮಾಡಿರುತ್ತದೆ. ಹಿಂದಿನ ತರಗತಿಯಲ್ಲಿ ಪಡೆಯಬೇಕಾಗಿದ್ದ ಕೌಶಲ ಮತ್ತು ಜ್ಞಾನವನ್ನು ಗಳಿಸಲು ಅನುಕೂಲವಾಗುವಂತೆ, ಹಿಂದಿನ ತರಗತಿಗಳ ಪ್ರಮುಖ ಕಲಿಕಾ ಸಾಮರ್ಥ್ಯಗಳನ್ನೂ ಒಳಗೊಂಡಂತೆ ಪ್ರಸ್ತುತ ಓದುತ್ತಿರುವ ತರಗತಿಯ ಪ್ರಮುಖ ಕಲಿಕಾ ಸಾಮರ್ಥ್ಯಗಳು (core competencies) ಹಾಗೂ ಬುನಾದಿ ಅಕ್ಷರಜ್ಞಾನ ಮತ್ತು ಸಂಖ್ಯಾಜ್ಞಾನಕ್ಕೆ ಸಂಬಂಧಿಸಿದ ಕಲಿಕಾಫಲಗಳನ್ನು ಅಂತರ್ಗತಗೊಳಿಸಿ 2022-2023 ನೇ ಸಾಲಿಗೆ ವಿಷಯಾವಾರು, ತರಗತಿವಾರು ಪರಿಷ್ಕೃತ ಕಲಿಕಾಫಲಗಳನ್ನು ಒಳಗೊಂಡ ಕಲಿಕಾ ಸಾಮಾಗ್ರಿಗಳನ್ನು ಸಿದ್ದಪಡಿಸಿ ಕಲಿಕಾ ಚೇತರಿಕೆಯನ್ನು ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ 2022 – 2023 ಶೈಕ್ಷಣಿಕ ವರ್ಷದಲ್ಲಿ “ಕಲಿಕಾಚೇತರಿಕೆ” ಉಪಕ್ರಮವನ್ನು ಜಾರಿಗೊಳಿಸಿದೆ.


ಕಲಿಕಾಫಲಗಳ ಸಾಧನೆಯಲ್ಲಿನ ಅಂತರವನ್ನು ಕಡಿಮೆಮಾಡಲು ಸಂಕಲನಾತ್ಮಕ ಮತ್ತು ಕಂಠಪಾಠ ಕೌಶಲಗಳನ್ನು ಪರೀಕ್ಷಿಸುವ ಸಾಂಪ್ರದಾಯಿಕ ವಿಧಾನದ ಬದಲು ಸಾಮರ್ಥ್ಯ ಆಧಾರಿತ ಹಾಗೂ ಮಕ್ಕಳಲ್ಲಿ ಕಲಿಕೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಪೂರಕವಾಗಿ ಕೋರ್ ಸಾಮರ್ಥ್ಯಗಳನ್ನು ಹಾಗೂ ಉನ್ನತ ಹಂತದ ಕೌಶಲಗಳ ಸಾಧನೆಯನ್ನು ಪರೀಕ್ಷಿಸುವ ಮೌಲ್ಯಮಾಪನ ವಿಧಾನವನ್ನು ಅಳವಡಿಸುವ ಕುರಿತು ಎನ್.ಇ.ಪಿ 2020 ಶಿಫಾರಸ್ಸು ಮಾಡಿದೆ. ಈ ಹಿನ್ನೆಲೆಯಲ್ಲಿ ತರಗತಿವಾರು, ವಿಷಯಾವಾರು ನಿರ್ದಿಷ್ಠ ಕಲಿಕಾಫಲಗಳ ಅನ್ವಯ ಕಲಿಕೆಗಾಗಿ ಮೌಲ್ಯಮಾಪನ (Assessment for learning) ಮತ್ತು ಕಲಿಕೆಯಾಗಿ ಮೌಲ್ಯಮಾಪನ (Assessment as learning) ತಂತ್ರಗಳನ್ನು ಅಳವಡಿಸುವುದು ಸೂಕ್ತವಾಗಿದೆ. ವಿದ್ಯಾರ್ಥಿಗಳಲ್ಲಿ ವಿವಿಧ ಹಂತಗಳಲ್ಲಿ ಕಲಿಕೆಯ ನಷ್ಟ ಆಗಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಅವಶ್ಯಕತೆಯನ್ನು ಅರಿತು ಅದರನ್ವಯ ತರಗತಿ ಸಂವಹನವನ್ನು ನಡೆಸಿ, ಕಲಿಕೆಯ ಮಟ್ಟಗಳ ವೈವಿಧ್ಯತೆಯನ್ನು ಪೂರೈಸಲು ಹಾಗೂ ಮಕ್ಕಳು ತಮ್ಮ ಕಲಿಕೆಯ ಮಟ್ಟಕ್ಕೆ ಅನುಗುಣವಾಗಿ ಸ್ವತಂತ್ರವಾಗಿ ಅಥವಾ ಗುಂಪುಗಳಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುವ ಒಂದು ವಿನೂತನ, ವಿಶೇಷ ಶೈಕ್ಷಣಿಕ ಪ್ರಕ್ರಿಯೆಯನ್ನು ಅಳವಡಿಸಿ ಕೊಳ್ಳಬೇಕಾಗಿದೆ.


ಎನ್.ಇ.ಇಪಿ 2020 ಶಿಫಾರಸ್ಸಿನಲ್ಲಿ ತಿಳಿಸಿರುವ ಮೇಲ್ಕಂಡ ಎಲ್ಲಾ ಅಂಶಗಳನ್ನು ಒಳಗೊಂಡ ಸಮಗ್ರ ಕಲಿಕಾಸಾಮಗ್ರಿಗಳನ್ನು ಸಿದ್ದಪಡಿಸಿ, 2022-2023 ಶೈಕ್ಷಣಿಕ ಸಾಲಿನಲ್ಲಿ ಅಳವಡಿಸುವುದರಿಂದ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಯಲ್ಲಿ ಉಂಟಾಗಿರುವ ಅಂತರವನ್ನು ಬೆಸೆಯಲು ಸಹಾಯಕ ವಾಗುತ್ತದೆ. ಈ ಹಿನ್ನೆಲೆಯಲ್ಲಿ ಬೋಧನಾ ಕಲಿಕಾ ಪ್ರಕ್ರಿಯೆಯ ಜೊತೆಯಲ್ಲಿಯೇ ಮೌಲ್ಯಮಾಪನವನ್ನು ಸಮನ್ವಯಗೊಳಿಸಿ, ಮೌಲ್ಯಮಾಪನ ಅಂಶಗಳ ದಾಖಲೆಯನ್ನು ನಿರ್ವಹಿಸುವ ಅವಶ್ಯಕತೆ ಇದೆ. ಆದ್ದರಿಂದ ವಿದ್ಯಾರ್ಥಿಯ ವೈಯಕ್ತಿಕ ಕೃತಿಸಂಪುಟವನ್ನು (student profile) ನಿರ್ವಹಿಸಲು ಅನುವಾಗುವಂತೆ perforated ಅಭ್ಯಾಸಹಾಳೆಗಳನ್ನು ಹಾಗೂ ಅವುಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಮಾರ್ಗಸೂಚಿಗಳನ್ನು ಒಳಗೊಂಡ ಶಿಕ್ಷಕರ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ.


ಕಲಿಕಾಚೇತರಿಕೆ ಉಪಕ್ರಮದ ಉದ್ದೇಶಗಳು:

  • ರಾಷ್ಟ್ರೀಯ ಶಿಕ್ಷಣ ನೀತಿ-2020 ಆಶಯದಂತೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನವನ್ನು ಬೆಳೆಸುವುದು.
  • 2022-23ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸುವುದರ ಮೂಲಕ ರಾಜ್ಯಾದ್ಯಂತ ನಿರ್ದೇಶಿತ ಏಕರೂಪದ ಶೈಕ್ಷಣಿಕ ಪ್ರಕ್ರಿಯೆಯನ್ನು ಜಾರಿಗೊಳಿಸುವುದನ್ನು ನಿಶ್ಚಿತಗೊಳಿಸುವುದು.
  • ಎಲ್ಲ ವಿದ್ಯಾರ್ಥಿಗಳ ಭಾವನಾತ್ಮಕ ಅಗತ್ಯತೆಗಳ ಬೆಂಬಲಕ್ಕೆ ಗಮನಹರಿಸಿ ಕಲಿಕಾ ಪ್ರಕ್ರಿಯೆಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದನ್ನು ಖಾತ್ರಿಪಡಿಸುವುದು.
  • ಎಲ್ಲಾ ವಿದ್ಯಾರ್ಥಿಗಳು ಬುನಾದಿ ಸಾಕ್ಷರತೆ, ಸಂಖ್ಯಾಜ್ಞಾನ ಮತ್ತು ಹಿಂದಿನ ಎರಡು ತರಗತಿಗಳಲ್ಲಿ ಅತ್ಯಗತ್ಯವಾಗಿ ಗಳಿಸಬೇಕಿದ್ದ ಹಾಗೂ ಪ್ರಸಕ್ತ ತರಗತಿಯ ಅತ್ಯಗತ್ಯ ಕಲಿಕಾಫಲಗಳನ್ನು ಸಾಧಿಸುವಂತೆ ಕ್ರಮವಹಿಸುವುದು.
  • ಒಟ್ಟಾರೆಯಾಗಿ 2023-24 ಶೈಕ್ಷಣಿಕ ಸಾಲಿನ ಆರಂಭದ ವೇಳೆಗೆ ಪ್ರತಿ ವಿದ್ಯಾರ್ಥಿಯು ತನ್ನ ತರಗತಿ ಮಟ್ಟದ ಕಲಿಕೆಯನ್ನು ಯಾವುದೇ ಅಡೆತಡೆ ಇಲ್ಲದೆ ಸಾಧಿಸಲು ಸಾಧ್ಯವಾಗುವಂತೆ ಸಜ್ಜುಗೊಳಿಸುವುದು

ವ್ಯಾಪ್ತಿ:

  • ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ನೇ ರಿಂದ 9 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣವನ್ನು ಕಲ್ಪಿಸುವುದು.
  • 2022 ರ ಜೂನ್ ತಿಂಗಳಿನಿಂದ ಮಾರ್ಚ್ 2023 ರ ವರೆಗೆ ಕಲಿಕಾ ಚೇತರಿಕೆ ಸಾಮಾಗ್ರಿಗಳನ್ನು ಮತ್ತು ಶಿಕ್ಷಕರ ಕೈಪಿಡಿಗಳನ್ನು ಕನ್ನಡ, ಇಂಗ್ಲಿಷ್, ಉರ್ದು, ಮರಾಠಿ, ತಮಿಳು, ತೆಲುಗು ಮತ್ತು ಹಿಂದಿ ಮಾಧ್ಯಮಗಳಲ್ಲಿ ಸಿದ್ದಪಡಿಸುವುದು.

ಕಲಿಕಾ ಚೇತರಿಕಾ ಉಪಕ್ರಮದ ರೂಪುರೇಷೆಗಳು:

  • ಕಳೆದ 2 ವರ್ಷಗಳಲ್ಲಿ ಮಕ್ಕಳಿಗೆ ಅಭ್ಯಾಸ, ಮಾರ್ಗದರ್ಶನ ಮತ್ತು ಶಿಕ್ಷಕರ ಬೆಂಬಲದ ಕೊರತೆಯಿಂದಾಗಿ ಅವರೀಗಾಗಲೇ ಪಡೆದಿದ್ದಂತಹ ಕೌಶಲ್ಯ ಮತ್ತು ಜ್ಞಾನವನ್ನು ಕಳೆದುಕೊಂಡಿರುತ್ತಾರೆ. ಹೀಗೆ ಉಂಟಾಗಿರುವ ಕಲಿಕಾಅಂತರವನ್ನು ಪರಿಗಣಿಸಿ ಹಿಂದಿನ ಎರಡು ತರಗತಿಗಳ ಪ್ರಮುಖ ಕಲಿಕಾ ಸಾಮರ್ಥ್ಯಗಳನ್ನೂ ಒಳಗೊಂಡಂತೆ ಪ್ರಸ್ತುತ ಓದುತ್ತಿರುವ ತರಗತಿಯ ಪ್ರಮುಖ ಕಲಿಕಾ ಸಾಮರ್ಥ್ಯಗಳು (core competencies) ಹಾಗೂ ಬುನಾದಿ ಅಕ್ಷರಜ್ಞಾನ ಮತ್ತು ಸಂಖ್ಯಾಜ್ಞಾನಕ್ಕೆ ಸಂಬಂಧಿಸಿದ ಕಲಿಕಾಫಲಗಳನ್ನು ಅಂತರ್ಗತಗೊಳಿಸಿ 2022-2023 ನೇ ಸಾಲಿಗೆ ವಿಷಯಾವಾರು, ತರಗತಿವಾರು ಪರಿಷ್ಕೃತ ಕಲಿಕಾಫಲಗಳನ್ನು ಒಳಗೊಂಡ ಕಲಿಕಾಸಾಮಗ್ರಿಗಳನ್ನು ಸಿದ್ದಪಡಿಸಿದೆ.
  • ವಿದ್ಯಾರ್ಥಿಗಳು ತಮ್ಮ ಕಲಿಕಾ ಗತಿಯಲ್ಲಿ ಸಾಗಲು ಅನುಕೂಲವಾಗುವಂತೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ನಿರ್ವಹಿಸಬಹುದಾದ ಸ್ವಯಂ ಕಲಿಕಾ ಚಟುವಟಿಕೆಗಳನ್ನು ಯೋಜಿಸಿದೆ.
  • ಆಯಾ ಘಟಕದಲ್ಲಿನ ಪ್ರಮುಖ ಕಲಿಕಾ ಸಾಮರ್ಥ್ಯಗಳನ್ನು ಪರಿಗಣಿಸಿ, ಅವುಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ಯೋಜಿಸಿದೆ.
  • ಚಟುವಟಿಕೆಗಳು/ ಮೌಲ್ಯಮಾಪನ ಚಟುವಟಿಕೆಗಳನ್ನು ಸೂಚಿಸುವಾಗ ಚಟುವಟಿಕೆ ಹಾಳೆಗಳನ್ನು ಅಥವಾ ಡಿ.ಎಸ್.ಇ.ಆರ್.ಟಿ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಿರುವ ಅಭ್ಯಾಸಪುಸ್ತಕಗಳನ್ನು, ಕಲಿಕಾ ಫಲ ಆಧಾರಿತ ಆಕ್ಟಿವಿಟಿ ಬ್ಯಾಂಕ್ ಗಳನ್ನು, ಇತರೆ ಲಭ್ಯ ಸಂಪನ್ಮೂಲಗಳನ್ನು ಪರಾಮರ್ಶನೆಗೆ ಶಿಕ್ಷಕರು ಬಳಸಬಹುದಾಗಿದೆ.
  • ಕಲಿಕಾ ಸಾಮಗ್ರಿಗಳಲ್ಲಿ ಸೂಚಿಸುವ ಚಟುವಟಿಕೆಗಳು ಸಲಹಾತ್ಮಕವಾಗಿದ್ದು ತರಗತಿಯ ಸನ್ನಿವೇಶಕ್ಕೆ ಅನುಗುಣವಾಗಿ ಹಾಗೂ ವಿದ್ಯಾರ್ಥಿಯ ಕಲಿಕಾಮಟ್ಟಕ್ಕನುಗುಣವಾಗಿ ಶಿಕ್ಷಕರು ಚಟುವಟಿಕೆಗಳನ್ನು ರೂಪಿಸಲು ಅವಕಾಶ ಕಲ್ಪಿಸಿದೆ.
  • ತರಗತಿವಾರು ವಿಷಯಾವಾರು ನಿರ್ದಿಷ್ಟ ಕಲಿಕಾಫಲಗಳ ಅನ್ವಯ ಕಲಿಕೆಗಾಗಿ ಮೌಲ್ಯಮಾಪನ ಮತ್ತು ಕಲಿಕೆಯಾಗಿ ಮೌಲ್ಯಮಾಪನ ತಂತ್ರಗಳನ್ನು ಅಳವಡಿಸಿ ಕಲಿಕಾಸಾವiಗ್ರಿಗಳನ್ನು ಸಿದ್ಧಪಡಿಸಿದೆ.
  • ಕಲಿಕಾ ಚೇತರಿಕೆ ಉಪಕ್ರಮದ ಅನುಪಾಲನೆಗಾಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಸಂದರ್ಶನ ನಮೂನೆಯನ್ನು ಸಿದ್ಧಪಡಿಸಿದೆ.
  • ಮಕ್ಕಳು ಕಲಿಕಾಫಲಗಳನ್ನು ಸಾಧಿಸಿರುವುದನ್ನು ದೃಢಪಡಿಸಿಕೊಳ್ಳಲು ಶಿಕ್ಷರಿಗಾಗಿ ಹಾಗೂ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಕಾರ್ಯಕ್ರಮದ ಅನುಪಾಲನೆ ಮಾಡಲು ನಿರ್ದಿಷ್ಠ ಆಪ್ಅನ್ನು ಸಿದ್ದಪಡಿಸಿ, ಅದನ್ನು ಬಳಸುವುದರ ಕುರಿತು ಮಾಗದರ್ಶನ ನೀಡಲಾಗುವುದು.
  • ರಾಜ್ಯದಲ್ಲಿನ ಆದರ್ಶ ಶಾಲೆಗಳು, ಅನುದಾನಿತ ಶಾಲೆಗಳು, ಅನುದಾನರಹಿತ ಶಾಲೆಗಳು, ಏಕಶಿಕ್ಷಕಶಾಲೆಗಳಲ್ಲಿ ಹಾಗೂ ವಿವಿಧ ತರಗತಿಗಳಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರವನ್ನು ನಿರ್ವಹಿಸುವ ಕುರಿತು ಶಿಕ್ಷಕರ ಕೈಪಿಡಿಗಳನ್ನು ಸಿದ್ದಪಡಿಸಲಾಗಿದೆ.
  • ರಾಜ್ಯದಲ್ಲಿನ ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಕಲಿಕಾ ಚೇತರಿಕೆ ಉಪಕ್ರಮವನ್ನು ತರಗತಿಗಳಲ್ಲಿ ನಿರ್ವಹಿಸುವ ಕುರಿತು ತರಬೇತಿ ನೀಡಲಾಗಿದೆ.
  • ದೀಕ್ಷಾ ಪೋರ್ಟಲ್ ನಲ್ಲಿ ಕಲಿಕಾ ಚೇತರಿಕೆ ಉಪಕ್ರಮದಲ್ಲಿ ವಿವಿಧ ವಿಷಯಗಳಲ್ಲಿ ಕಲಿಕಾಫಲಗಳನ್ನು ಅನುಕೂಲಿಸುವ ಕುರಿತು ಪ್ರತ್ಯೇಕ ಕೋರ್ಸ್ಅನ್ನು ಅಳವಡಿಸಲಾಗಿದೆ.

ಕಲಿಕಾಫಲಗಳ ಮರುಹೊಂದಾಣಿಕೆ:

ಹಿಂದಿನ ಎರಡು ಶೈಕ್ಷಣಿಕ ವರ್ಷಗಳಲ್ಲಿ ಗಳಿಸಿಕೊಳ್ಳಬೇಕಾದ ಸಾಮರ್ಥ್ಯಗಳನ್ನು ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಗಳಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಹಾಗೂ ಎಲ್ಲ ವಿಷಯಗಳಲ್ಲಿ ಈ ಹಿಂದಿನ ಎರಡು ವರ್ಷಗಳಲ್ಲಿ ಗಳಿಸಿ ಕೊಳ್ಳಲೇಬೇಕಾದ ಅತ್ಯಗತ್ಯ ಸಾಮರ್ಥ್ಯಗಳು ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದ ಅತ್ಯಗತ್ಯ ಸಾಮರ್ಥ್ಯಗಳನ್ನು ಗಳಿಸಿಕೊಂಡು ನಿರೀಕ್ಷಿತ ಮಟ್ಟದಕಲಿಕೆಯನ್ನುಸಾಧಿಸಬೇಕುಎಂಬುದೇಕಲಿಕಾಚೇತರಿಕೆಯಪ್ರಮುಖಆಶಯ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಈಗಾಗಲೇ ಎರಡು ವರ್ಷಗಳಲ್ಲಿ ಉಂಟಾಗಿರುವ ಕಲಿಕಾ ಅಂತರವನ್ನು ಸರಿದೂಗಿಸಲು, ಪ್ರಸ್ತುತ ವರ್ಷಕ್ಕೆ ಕಲಿಕಾಫಲಗಳನ್ನು ಮರುಹೊಂದಾಣಿಕೆ ಮಾಡಲಾಗಿದೆ. ಪ್ರತಿ ತರಗತಿಗೆ ಹಿಂದಿನ ಎರಡು ವರ್ಷದ ಅತ್ಯಗತ್ಯ ಕಲಿಕಾಫಲಗಳು, ಪ್ರಸ್ತುತ ತರಗತಿಯ ಅಗತ್ಯ ಕಲಿಕಾಫಲಗಳು ಮತ್ತು ಬುನಾದಿ ಸಾಕ್ಷರತೆ ಮತ್ತು ಗಣಿತಕ್ಕೆ ಸಂಬಂಧಿಸಿದ ಕಲಿಕಾಫಲಗಳನ್ನು ಆಧರಿಸಿದ ಕಲಿಕಾಸಾಮಗ್ರಿಗಳನ್ನು ಸಿದ್ಧಪಡಿಸಲಾಗಿದೆ. ಕಲಿಕಾಫಲಗಳ ಮರುಹೊಂದಾಣಿಕೆಯ ನಂತರ ತರಗತಿವಾರು ಹಾಗೂ ವಿಷಯವಾರು ಆಯ್ಕೆ ಮಾಡಿದ ಒಟ್ಟು ಕಲಿಕಾಫಲಗಳ ಪಟ್ಟಿಯನ್ನು ಸುಗಮಕಾರರ ಕೈಪಿಡಿಯಲ್ಲಿ ವಿಸ್ತೃತವಾಗಿ ನೀಡಲಾಗಿದೆ.


ಸಂಪನ್ಮೂಲಗಳ ಪರಿಚಯ ಮತ್ತು ಬಳಕೆ:

ವಿದ್ಯಾರ್ಥಿಗಳಲ್ಲಿಉಂಟಾಗಿರುವ ಕಲಿಕಾ ಅಂತರವನ್ನು ಸರಿದೂಗಿಸಲು 2022-23 ಶೈಕ್ಷಣಿಕ ವರ್ಷದ ಶೈಕ್ಷಣಿಕ ಪ್ರಕ್ರಿಯೆಯನ್ನು ಮರುಹೊಂದಾಣಿಕೆ ಮಾಡಿಕೊಳ್ಳಲು ಎರಡು ರೀತಿಯ ಸಂಪನ್ಮೂಲಗಳನ್ನು ಸೃಜಿಸಲಾಗಿದೆ.


ಸುಗಮಕಾರರ (ಶಿಕ್ಷಕರ) ಕೈಪಿಡಿ:ಸುಗಮಕಾರರ ಕೈಪಿಡಿಯು 1 ರಿಂದ 9 ನೇ ತರಗತಿಯ ಎಲ್ಲಾ ವಿಷಯಗಳಲ್ಲಿ ಮರು ಹೊಂದಾಣಿಕೆ ಮಾಡಿಕೊಂಡಿರುವ ಪ್ರಮುಖ ಕಲಿಕಾಫಲಗಳಿಗೆ ಬೋಧನಾ ತರಗತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಮಾರ್ಗದರ್ಶನ ಮಾಡುತ್ತದೆ. ತರಗತಿವಾರು, ವಿಷಯವಾರು ಮರು ಹೊಂದಾಣಿಕೆ ಮಾಡಿರುವ ನಿರ್ದಿಷ್ಟ ಕಲಿಕಾ ಫಲವಾರು ಚಟುವಟಿಕೆಗಳನ್ನು ಬೋಧನಾ-ಕಲಿಕಾ ಪ್ರಕ್ರಿಯೆಯಲ್ಲಿ ಹೇಗೆ ಸಮ್ಮಿಳಿತಗೊಳಿಸಿಕೊಳ್ಳಬಹುದು ಎಂಬ ಬಗ್ಗೆ ವಿವರವನ್ನು ಸುಗಮಕಾರರ ಕೈಪಿಡಿ ನೀಡುತ್ತದೆ. ಮಾದರಿಗಾಗಿ ಕೆಲವು ಚಟುವಟಿಕೆಗಳನ್ನು ರಚಿಸಿಕೊಡಲಾಗಿದೆ. ಸುಗಮಕಾರರ ಕೈಪಿಡಿರಚನೆಯ ಸಂದರ್ಭದಲ್ಲಿ ಬುನಾದಿ ಸಾಮರ್ಥ್ಯಗಳನ್ನು ಬೆಳೆಸಲು ಅಗತ್ಯವಿರುವ ಬೋಧನಾ ವಿಧಾನ ಮತ್ತು ಚಟುವಟಿಕೆಗಳನ್ನು ನಿರ್ದೇಶಿಸಲಾಗಿದೆ. ಈ ಚಟುವಟಿಕೆಗಳು ಪಠ್ಯಪುಸ್ತಕಗಳಲ್ಲಿನ ಕಲಿಕಾಂಶಗಳಿಗೆ ಪೂರಕವಾಗಿವೆ. ಸುಗಮಕಾರರ ಕೈಪಿಡಿಯಲ್ಲಿ ನಿರ್ದೇಶಿಸಿರುವ ಬೋಧನಾ-ಕಲಿಕಾಪ್ರಕ್ರಿಯೆಯನ್ನು ವಿದ್ಯಾರ್ಥಿಗಳಿಗೆ ಸೃಜಿಸಿರುವ ‘ಕಲಿಕಾಹಾಳೆ’ಯ ಅಭ್ಯಾಸಗಳಿಗೆ ಅಗತ್ಯವಿರುವಲ್ಲಿ ಸಂಪರ್ಕ ಕಲ್ಪಿಸಲಾಗಿದೆ.


ಕಲಿಕಾಹಾಳೆಗಳು: ಸುಗಮಕಾರರ ಕೈಪಿಡಿ ಸುಗಮಕಾರರಿಗೆ ಮಾರ್ಗದರ್ಶನ ನೀಡಿದರೆ, ಕಲಿಕಾಹಾಳೆಗಳು ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಚಟುವಟಿಕೆಗಳ ಗುಚ್ಛವಾಗಿರುತ್ತವೆ. ಕಲಿಕಾಹಾಳೆಗಳು ತರಗತಿವಾರು ಹಾಗೂ ವಿಷಯವಾರು ಆಯ್ಕೆ ಮಾಡಿದ ಕಲಿಕಾಫಲಗಳಿಗೆ ಹಲವಾರು ಚಟುವಟಿಕೆಗಳನ್ನು ಸೃಜಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಕಲಿಕಾ ಅಂತರವನ್ನು ಗಮನದಲ್ಲಿಟ್ಟುಕೊಂಡು ಚಟುವಟಿಕೆಗಳನ್ನು ರಚಿಸಲಾಗಿದೆ. ಈ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಸ್ವತಃ ಅಥವಾ ಸುಗಮಕಾರರ ಸಹಾಯದಿಂದ ಕೈಗೊಳ್ಳಬೇಕೆಂಬ ಉದ್ದೇಶದಿಂದ ರಚಿಸಲಾಗಿದೆ. ಪ್ರತಿ ಕಲಿಕಾ ಫಲಕ್ಕಾಗಿ ರಚಿತವಾಗಿರುವ ಚಟುವಟಿಕೆಗಳ ಗುಚ್ಛವನ್ನು ವಿದ್ಯಾರ್ಥಿಗಳಿಗೆ ನೀಡಿ ಕಲಿಕಾ ಪ್ರಕ್ರಿಯೆಯನ್ನು ಕೈಗೊಳ್ಳಲು ಕಲಿಕಾ ಹಾಳೆಗಳನ್ನು ಬಳಸಿಕೊಳ್ಳಬೇಕು. ಪ್ರತಿ ಕಲಿಕಾಫಲದ ನಂತರ ಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಸ್ತಾಪಿಸಲಾಗಿದ್ದು ನಮೂದಿಸಿರುವ ಸ್ತರಗಳನ್ನು ಬಳಸಿ ಕಲಿಕೆಯ ಮಟ್ಟವನ್ನು ದೃಢೀಕರಿಸಬೇಕು.


ಹೆಚ್ಚುವರಿ ಸಂಪನ್ಮೂಲಗಳು: ಶಿಕ್ಷಕರು ಕಲಿಕಾಫಲ ಮತ್ತು ತರಗತಿಪ್ರಕ್ರಿಯೆಗಳ ಬಗ್ಗೆ ಡಿ.ಎಸ್.ಇ.ಆರ್.ಟಿಯಿಂದ ದೀಕ್ಷಾ ಪೋರ್ಟಲ್ನಲ್ಲಿ ಎನ್.ಇ.ಪಿ 2020 ಆಧಾರಿತ ಮಾಡ್ಯೂಲ್ಗಳಲ್ಲಿ ಹಂತವಾರು (ಬುನಾದಿ ಹಂತ, ಪೂರ್ವ ಸಿದ್ಧತಾ ಹಂತ, ಮಾಧ್ಯಮಿಕ ಹಂತ ಮತ್ತು ಪ್ರೌಢ ಹಂತ) ಕಲಿಕಾಫಲಗಳನ್ನು ಅನುಕೂಲಿಸುವ ಮತ್ತು ಮೌಲ್ಯಾಂಕನ ಮಾಡುವ ಬಗ್ಗೆ ವಿವರವಾದ ಕೋರ್ಸ್ ಲಭ್ಯವಿದೆ. ಹಾಗೆಯೇ ಕಲಿಕಾ ಚೇತರಿಕೆ ಉಪಕ್ರಮದಲ್ಲಿ ವಿವಿಧ ವಿಷಯಗಳಲ್ಲಿ ಕಲಿಕಾಫಲಗಳನ್ನು ಅನುಕೂಲಿಸುವ ಕುರಿತು ಪ್ರತ್ಯೇಕ ಕೋರ್ಸ್ ಅನ್ನು ಅಳವಡಿಸಲಾಗಿದೆ. ಇದರಲ್ಲಿರುವ ಕಪ್ಲೆಟ್ಗಳು ಮತ್ತು ವೀಡಿಯೋಗಳಿಂದ ಶಿಕ್ಷಕರು ಹೆಚ್ಚುವರಿ ಮಾಹಿತಿ ಮತ್ತು ಅನುಭವ ಪಡೆಯಬಹುದಾಗಿದೆ. ಹಾಗೆಯೇ 2021-22 ನೇ ಸಾಲಿಗೆ ಸಿದ್ದಪಡಿಸಿರುವ ಚಟುವಟಿಕೆ ಸಹಿತ ಪರ್ಯಾಯ ಶೈಕ್ಷಣಿಕ ಯೋಜನೆ, ಅಭ್ಯಾಸ ಪುಸ್ತಕಗಳು ಮತ್ತು ಇತರೆ ಶೈಕ್ಷಣಿಕ ಸಂಪನ್ಮೂಲಗಳು ಡಿ.ಎಸ್.ಇ.ಆರ್.ಟಿ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಶಿಕ್ಷಕರು ಅವುಗಳನ್ನು ಬಳಸಬಹುದಾಗಿದೆ.


ಮಳೆಬಿಲ್ಲುಸಾಹಿತ್ಯ:ಕಲಿಕಾ ಚೇತರಿಕೆ ಉಪಕ್ರಮದ ಪೂರ್ವಸಿದ್ಧತೆಗಾಗಿ ಮಕ್ಕಳು ಕಲಿಕಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಶಾಲಾ ಆರಂಭವನ್ನು ಮಗು ಹಬ್ಬದಂತೆ ಆಚರಿಸುವ ಸಲುವಾಗಿ ಮಕ್ಕಳ ಸ್ನೇಹಿ ಚಟುವಟಿಕೆಗಳಿಂದ ಕೂಡಿದ ‘ಮಳೆಬಿಲ್ಲುʼ ಕಾರ್ಯಕ್ರಮದ ಸಾಹಿತ್ಯವನ್ನು ಹಾಗೂ ಇದನ್ನು ತರಗತಿಯಲ್ಲಿ ಅಳವಡಿಸಲು ಶಿಕ್ಷಕರಿಗೆ ಸೂಚನೆಗಳನ್ನೊಳಗೊಂಡ ಮಾರ್ಗಸೂಚಿಯನ್ನು ಶಾಲಾ ಪ್ರಾರಂಭದ ಮೊದಲ 15 ದಿನಗಳಿಗೆ ಒದಗಿಸಲಾಗಿದೆ. ಇದು ಡಿ.ಎಸ್.ಇ.ಆರ್.ಟಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ.


ಪೂರ್ವ ಸಿದ್ಧತಾ ಚಟುವಟಿಕೆಗಳ ಮಾರ್ಗಸೂಚಿ: 1 ರಿಂದ 9ನೇ ತರಗತಿಯ ವರೆಗೆ ಭಾಷೆ, ಪರಿಸರ ಅಧ್ಯಯನ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಸಂದರ್ಭ, ಸನ್ನಿವೇಶ ಹಾಗೂ ವಿವೇಚನಾನುಸಾರವಾಗಿ ಸಾಮರ್ಥ್ಯ-ಅವಲೋಕನ ಪ್ರಕ್ರಿಯೆಯನ್ನು ನಡೆಸಲು ಸಲಹಾತ್ಮಕ ಚಟುವಟಿಕೆಗಳನ್ನು ಒಳಗೊಂಡ ‘ಪೂರ್ವ ಸಿದ್ಧತಾ ಚಟುವಟಿಕೆಗಳ ಮಾರ್ಗಸೂಚಿʼ ಯನ್ನು ನೀಡಲಾಗಿದೆ. ಇದು ಡಿ.ಎಸ್.ಇ.ಆರ್.ಟಿ ವೆಬ್ ಸೈಟ್ನಲ್ಲಿ ಅಪ್ಲೋಡ್ ಮಾಡಿದೆ.


ಕಲಿಕಾ ಚೇತರಿಕೆ ಉಪಕ್ರಮದಲ್ಲಿ ಮೌಲ್ಯಮಾಪನ ಸ್ವರೂಪ

ಪ್ರಸಕ್ತ ಸಾಲಿನ 1 ರಿಂದ 9 ನೇ ತರಗತಿಗಳಿಗೆ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಶಾಲಾಧಾರಿತ ಮೌಲ್ಯಮಾಪನ (ಸಿ.ಸಿ.ಇ.) ವನ್ನು ಈ ಹಿಂದಿನಂತೆಯೇ ಮುಂದುವರೆಸಿದೆ. ಆದರೆ ಈ ಮೌಲ್ಯಮಾಪನವು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮರು ಹೊಂದಿಸಿಕೊಂಡ ಕಲಿಕಾಫಲಗಳನ್ನು ಆಧರಿಸಿದ ಕಲಿಕಾಹಾಳೆಗಳು ಮತ್ತು ತರಗತಿಯಲ್ಲಿ ನಡೆಯುವ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಆಧರಿಸಿದೆ. ಮೌಲ್ಯಮಾಪನ ಸಂಬಂಧ ವಿವರವಾದ ಮಾರ್ಗಸೂಚಿಯನ್ನು ಪ್ರತ್ಯೇಕವಾಗಿ ನೀಡಲಾಗಿದೆ.


ಇಂಗ್ಲಿಷ್ ಭಾಷಾ ಕೋಶ

ವಿಭಾಗದ ಹೆಸರು: ಇಂಗ್ಲಿಷ್ ಭಾಷಾ ಕೋಶ

ಪರಿಚಯ: ಕರ್ನಾಟಕ ಸರ್ಕಾರವು 2019-20ನೇ ಸಾಲಿನಲ್ಲಿ 1000 ಕೆಪಿಎಸ್ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿದೆ. ಆ ಕಾರಣದಿಂದ ಇಂಗ್ಲಿಷ್ ಭಾಷಾ ಕೋಶವನ್ನು ಇಂಗ್ಲಿಷ್ ಭಾಷೆ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಕರನ್ನು ಬಲಪಡಿಸಲು ಪ್ರಾರಂಭಿಸಲಾಯಿತು.

ಉದ್ದೇಶಗಳು:

  1. ಇಂಗ್ಲಿಷ್ ಭಾಷೆಯ ಶಿಕ್ಷಕರಲ್ಲಿ ವೃತ್ತಿಪರ ಬೆಳವಣಿಗೆಯನ್ನು ತರುವುದು.
  2. ಆಂಗ್ಲ ಭಾಷಾ ಶಿಕ್ಷಕರ ಭಾಷಾ ಪ್ರೌಢಿಮೆಯನ್ನು ಉತ್ತೇಜಿಸುವುದು.
  3. ಶಿಕ್ಷಕರು ಪ್ರತಿಫಲನಾತ್ಮಕ ಅಭ್ಯಾಸಿಗಳಾಗಲು ಸಹಾಯ ಮಾಡುವುದು.
  4. ಇಂಗ್ಲಿಷ್ ಬೋಧನೆಯಲ್ಲಿ ಸ್ವಯಂ-ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಸ್ಥಳಾವಕಾಶವನ್ನು ಒದಗಿಸುವುದು.

ವಿಭಾಗದ ಚಟುವಟಿಕೆಗಳು:

1. ಇಂಗ್ಲಿಷ್ ಭಾಷಾ ಕೋಶ:

  • ಇಂಗ್ಲಿಷ್ ಭಾಷಾ ಸಬಲೀಕರಣ ಕಾರ್ಯಕ್ರಮ (ಇಎಲ್ಇಪಿ).

ಇಂಗ್ಲಿಷ್ ಭಾಷೆಯನ್ನು ಬೋಧಿಸುತ್ತಿರುವ ಇಂಗ್ಲಿಷ್ ಭಾಷಾ ಶಿಕ್ಷಕರನ್ನು ಸಶಕ್ತಗೊಳಿಸಲು ಕರ್ನಾಟಕದಲ್ಲಿ ಇಎಲ್ಇಪಿಯನ್ನು 2016-17 ರಲ್ಲಿ ಪ್ರಾರಂಭಿಸಲಾಯಿತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 320.00 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. 1700 ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮೂಲ ತರಬೇತಿ ಗುರಿ ಮತ್ತು 1700 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸುಧಾರಿತ ಇಎಲ್ಇಪಿ ತರಬೇತಿ ಗುರಿ ಹೊಂದಲಾಗಿದೆ.

ತರಬೇತಿ ಗುರಿ ಸಾಧನೆ ಪ್ರತಿಶತ ಪ್ರಗತಿ
ELEP-Basic 1836179097.49
ELEP-ಆಧುನೀಕೃತ 140031349496.37

1. 2020-21ನೇ ಸಾಲಿಗೆ ಇಂಗ್ಲಿಷ್ ಮೀಡಿಯಂ ಟೀಚರ್ ಇಂಡಕ್ಷನ್ ಪ್ರೋಗ್ರಾಂ (EMTIP)

  • EMTIP 1ನೇ ತರಗತಿ ಶಿಕ್ಷಕರು, ಸೇರ್ಪಡೆ 15 ದಿನಗಳ ತರಬೇತಿ ಗುರಿ 1001 ರಿಂದ 883 ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ.
  • EMTIP 2ನೇ ತರಗತಿ ಶಿಕ್ಷಕರು, ಓರಿಯೆಂಟೇಶನ್ 6 ದಿನಗಳ ತರಬೇತಿಯ ಗುರಿ 1001 - 935 ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ.
  • 2020-21 ರಲ್ಲಿ, ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ 1000 ಇಂಗ್ಲಿಷ್ ಮಾಧ್ಯಮ ವಿಭಾಗಗಳನ್ನು ಮಂಜೂರು ಮಾಡಲಾಗಿದೆ

2. ಪಿಡಿಪಿ: ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮ: 1 ರಿಂದ 5ನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ :
ಉದ್ದೇಶಗಳು:

  • ಪ್ರಾಥಮಿಕ ಶಾಲೆಗಳ ಶಿಕ್ಷಕರಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಸಲು
  • ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದೊಂದಿಗೆ ಇಂಗ್ಲೀಷ್ ಭಾಷೆ ಕಾಲಿಸುವುದು.

ಈ ತರಬೇತಿಯು 2019-20ನೇ ಸಾಲಿನಲ್ಲಿ ಪ್ರಾರಂಭವಾಯಿತು. ಆರ್.ಐ.ಎಸ್.ಐ. ಬೆಂಗಳೂರು ಸಂಪನ್ಮೂಲ ವ್ಯಕ್ತಿಗಳು ಒಟ್ಟು 6 ತಂಡಗಳಲ್ಲಿ 408 ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದು, ಬೆಂಗಳೂರಿನ ಪ್ರತಿ ಜಿಲ್ಲೆಯಲ್ಲೂ ಇಬ್ಬರು ಶಿಕ್ಷಕರು 15 ದಿನಗಳ ಕಾಲ ತರಬೇತಿ ನೀಡುತ್ತಿದ್ದಾರೆ.

ತರಬೇತಿ ಗುರಿ ಸಾಧನೆ ಪ್ರತಿಶತ ಪ್ರಗತಿ
ಪಿಡಿಪಿ 408 197 48.00

3. ಆಲೂರು ವೆಂಕಟರಾವ್ ಭಾಷಾ ಕೌಶಲ್ಯ ತರಬೇತಿ ಕೇಂದ್ರಗಳು:

ಈ ಸಂಸ್ಥೆಯು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಕನ್ನಡ, ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳ ಶಿಕ್ಷಕರ ಬೋಧನೆಗೆ ಈ ತರಬೇತಿಯನ್ನು ನೀಡುತ್ತಿದೆ. ಶ್ರೀ. ಆಲೂರು ವೆಂಕಟರಾವ್ ಭಾಷಾ ಕೌಶಲ್ಯ ಆಧಾರಿತ ತರಬೇತಿ ಕೇಂದ್ರಗಳನ್ನು 2019-20 ರಲ್ಲಿ ಸ್ಥಾಪಿಸಲಾಗಿದೆ.

04 ಅನುಸರಣಾಶೈಕ್ಷಣಿಕ ವಿಭಾಗಗಳೆಂದರೆ :-

  • ಬೆಂಗಳೂರು ವಿಭಾಗ- ಸಿ.ಟಿ.ಇ., ಚಿತ್ರದುರ್ಗ,
  • ಮೈಸೂರು ವಿಭಾಗ- ಸಿ.ಟಿ.ಇ,ಮೈಸೂರು,
  • ಬೆಳಗಾವಿ ವಿಭಾಗ-ಸಿ.ಟಿ.ಇ., ಬೆಳಗಾವಿ
  • ಕಲ್ಬುರ್ಗಿ ವಿಭಾಗ- ಸಿ.ಟಿ.ಇ., ಕಲ್ಬುರ್ಗಿ

2019-20ನೇ ಹಣಕಾಸು ವರ್ಷದಲ್ಲಿ "ಶ್ರೀ ಆಲೂರು ವೆಂಕಟರಾವ್ ಭಾಷಾ ಕೌಶಾಲ ಟ್ರೈನಿಂಗ್ ಸಿಎಂಟರ್ಸ್" ಸ್ಥಾಪಿಸಲು 200.00 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಕೋವಿಡ್ -19, ಪರಿಸ್ಥಿತಿಯಿಂದಾಗಿ ತರಬೇತಿಯನ್ನು ಪ್ರಾರಂಭಿಸಲಾಗಿಲ್ಲ, ಬದಲಿಗೆ ಎಲ್ಲಾ 4 ಕೇಂದ್ರದ ಭಾಷಾ ಪ್ರಯೋಗಾಲಯಗಳಲ್ಲಿ ತರಬೇತಿ ನೀಡುವ ಕಾರ್ಯ ಪ್ರಗತಿಯಲ್ಲಿದೆ. 2022-23 ನೇ ಸಾಲಿನಲ್ಲಿ ತಲಾ 4 ಲಕ್ಷ ರೂಗಳನ್ನು 4 ಸಿ.ಟಿ.ಈ. ಗಳಿಗೆ ಬಿಡುಗಡೆ ಮಾಡಲಾಗಿದೆ. ಭಾಷಾ ಪ್ರಯೋಗಾಲಯಗಳ ಭೌತಿಕ ಸೌಲಭ್ಯಗಳ ಸಿದ್ಧತೆ ಪ್ರಗತಿಯಲ್ಲಿದೆ.

4.ಗಡಿನಾಡ ಕನ್ನಡ ಶಾಲೆಗಳ ಭಾಷಾ ಪ್ರಯೋಗಾಲಯ

ಗಡಿನಾಡ ಕನ್ನಡ ಶಾಲೆಗಳಲ್ಲಿ "ಕನ್ನಡ ಭಾಷಾ ಪ್ರಯೋಗಾಲಯ"ವನ್ನು ಪ್ರಾರಂಭಿಸಲು ಕನ್ನಡಾಭಿವೃದ್ದಿ ಪ್ರಾಧಿಕಾರ ಯೋಜಿಸಿದೆ. ಅನ್ಯ ಭಾಷಾ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾ ಕೌಶಲ್ಯಗಳನ್ನು ಸುಧಾರಿಸುವುದು. ತಾಂತ್ರಿಕ ಬೆಂಬಲದಿಂದ ವಿದ್ಯಾರ್ಥಿಗಳು ಕನ್ನಡವನ್ನು ಸುಲಭವಾಗಿ ಕಲಿಯುವಂತೆ ಮಾಡುವುದು.

ಚಟುವಟಿಕೆಗಳಿಗಾಗಿ ಕಾರ್ಯಕ್ರಮಗಳು:

  1. EMTIP 1,2,3 ಮತ್ತು 4 ಚಟುವಟಿಕೆಗಳು.
  2. ಪಿಡಿಪಿ ಕಾರ್ಯಕ್ರಮಗಳು
  3. CELT ಕಾರ್ಯಕ್ರಮಗಳು
  4. ಪಿಜಿಡಿಇಎಲ್ ಟಿ ಕಾರ್ಯಕ್ರಮಗಳು
  5. ಡಿ.ಐ.ಇ.ಸಿ ಕಾರ್ಯಕ್ರಮಗಳು

ಕಾರ್ಯಕ್ರಮದ ಪ್ರಗತಿ:

  1. 2022-23ನೇ ಸಾಲಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಮೇಲೆ EMTIP 1,2,3 ಮತ್ತು 4.
  2. 2022-23ನೇ ಸಾಲಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ CLET ಕಾರ್ಯಕ್ರಮಗಳು.
  3. 2022-23ನೇ ಸಾಲಿನಲ್ಲಿ PGDELT ಕಾರ್ಯಕ್ರಮಗಳು ನಡೆಯುತ್ತಿವೆ.
  4. 2022-23ನೇ ಸಾಲಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ DIEC. ಕಾರ್ಯಕ್ರಮಗಳು.

ತರಬೇತಿ ಕಾರ್ಯಕ್ರಮದ ವಿವರಗಳು:

  1. EMTIP 1,2,3 ಮತ್ತು 4 (6/8/10 ದಿನಗಳು) ತರಬೇತಿ ಕಾರ್ಯಕ್ರಮ.
  2. CLET 30 ದಿನಗಳ ತರಬೇತಿ ಕಾರ್ಯಕ್ರಮ.
  3. ಸಾಮರ್ಥ್ಯ ವರ್ಧನೆ 5 ದಿನಗಳ ತರಬೇತಿ ಕಾರ್ಯಕ್ರಮ.
  4. ಶೈಕ್ಷಣಿಕ ಮಾರ್ಗದರ್ಶನ 5 ದಿನಗಳ ತರಬೇತಿ ಕಾರ್ಯಕ್ರಮ.
  5. ಇಂಡಕ್ಷನ್ ಟ್ರೈನಿಂಗ್ ಪ್ರೋಗ್ರಾಂ 10 ದಿನಗಳ ತರಬೇತಿ ಕಾರ್ಯಕ್ರಮ.
  6. ಸ್ಪೋಕನ್ ಇಂಗ್ಲಿಷ್ 14 ದಿನಗಳ ತರಬೇತಿ ಕಾರ್ಯಕ್ರಮ.

ತರಬೇತಿ ಕಾರ್ಯಕ್ರಮದ 3 ವರ್ಷಗಳ ಅಂಕಿಅಂಶಗಳು

SL NO ತರಬೇತಿಯ ಹೆಸರು ಟಾರ್ಗೆಟ್ ಸಾಧನೆ ಶೇಕಡ ರಷ್ಟು ಪ್ರಗತಿ
1 EMTIP-1 (15 ದಿನಗಳು) 3740 3596 96.14
2 EMTIP-2 (6 ದಿನಗಳು) 2340 2298 98.2
3 EMTIP-3 (8 ದಿನಗಳು) 1001 981 98
4 EMTIP-3 MRP ತರಬೇತಿ @ ಆರ್ಐಎಸ್ಐ- ಬೆಂಗಳೂರು. (8 ದಿನಗಳು) 175 169 96.57
ಒಟ್ಟು 7256 7044 97.08

SL NO ತರಬೇತಿಯ ಹೆಸರು ಟಾರ್ಗೆಟ್ ಸಾಧನೆ ಶೇಕಡ ರಷ್ಟು ಪ್ರಗತಿ
1 ಪಿಡಿಪಿ- ಬೇಸಿಕ್** 680 436 64.11
2 CELT- ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆನ್ ಲೈನ್ ತರಬೇತಿ 75 99 131
3 CELT - ಪ್ರೌಢಶಾಲಾ ಶಿಕ್ಷಕರ ಆನ್ ಲೈನ್ ತರಬೇತಿ 75 95 126.67
ಒಟ್ಟು 830 595 71.69

ಡಯಟ್ನೊಂದಿಗೆ ನಮ್ಮ ವಿಭಾಗದ ಇಂಟರ್ ಲಿಂಕ್ ಮತ್ತು ಕಾರ್ಯನಿರ್ವಹಣೆ:

ಇಲಾಖೆಯು ನೀಡುವ ತರಬೇತಿಯನ್ನು ಸಂಘಟಿಸಲು, ಡಯಟ್ ಮಟ್ಟದಲ್ಲಿ ತರಬೇತಿಗಾಗಿ ಶಿಕ್ಷಕರನ್ನು ನಿಯೋಜಿಸಲು ಮತ್ತು ತರಬೇತಿ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು, ಬಿಇಒ/ ಬಿಆರ್ ಸಿ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಸಲಹೆಗಳು ಮತ್ತು ಸೂಚನೆಗಳನ್ನು ನೀಡಲು ಡಯಟ್ಗಳ ಸಹಕಾರವನ್ನು ಕೋರಲಾಗುತ್ತದೆ.

ಡಿಎಸ್ ಇಆರ್ ಟಿ ಒದಗಿಸಬೇಕಾದ ಮಾಹಿತಿಯನ್ನು ಪಡೆಯಲು ಡಯಟ್ ಗಳ ಪ್ರಾಂಶುಪಾಲರು ಮತ್ತು ಇಂಗ್ಲಿಷ್ ಭಾಷಾ ಕೋಶ ಪ್ರೌಢಶಾಲೆಯ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲಾಗುತ್ತಿದೆ.

ಶಿಕ್ಷಕರ ತರಬೇತಿಯ ಕ್ರಿಯಾ ಯೋಜನೆ, ತರಬೇತಿಯ ಅನುಷ್ಠಾನ, ವೇಳಾಪಟ್ಟಿ, ಪ್ರಗತಿ ಮೇಲ್ವಿಚಾರಣೆ, ಇಮೇಲ್ ಗಳ ದೈನಂದಿನ ಮೇಲ್ವಿಚಾರಣೆ, ಅದಕ್ಕೆ ಅನುಗುಣವಾಗಿ ವರ್ತಿಸುವುದು, ಇಮೇಲ್ ಗಳಿಗೆ ಪ್ರತಿಕ್ರಿಯಿಸುವುದು.

ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳಿಗಾಗಿ ಡಯಟ್ ಗೆ ಅನುದಾನ ಒದಗಿಸುವುದು. ತರಬೇತಿ ಕಾರ್ಯಕ್ರಮಗಳಿಗಾಗಿ ಆರ್.ಐ.ಎಸ್.ಐ.ಗೆ ಅನುದಾನವನ್ನು ಒದಗಿಸುವುದು.

View this page in English
ನವೀಕರಿಸಿದ ದಿನಾಂಕ : 3/4/2023

ಮೇಲೆ | ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ ,ಡಿ.ಎಸ್.ಇ.ಆರ್.ಟಿ., ಬೆಂಗಳೂರು
DISCLAIMER :The contents are the responsibility of the Department of State Education Research and Training and they may be contacted for further clarifications. email: dpi.dsert@gmail.com